ಮಂಗಳೂರು | ಕಡಲಿಗೆ ಹಾರಿ ಯುವತಿ ಆತ್ಮಹತ್ಯೆಗೆ ಯತ್ನ: ರಕ್ಷಿಸಲು ಹೋದ ಪ್ರಿಯತಮ ಸಮುದ್ರಪಾಲು !

Prasthutha|

ಉಳ್ಳಾಲ: ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಲು ಹೋದ ಆಕೆಯ ಸ್ನೇಹಿತ ಸಮುದ್ರಪಾಲದ ಘಟನೆ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.

- Advertisement -

ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿ.ಸೋಜಾ (28) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತನ ಸ್ನೇಹಿತೆ ಅಶ್ವಿತಾ ಫೆರಾವೋರನ್ನು ಸ್ಥಳೀಯ ಜೀವ ರಕ್ಷಕ ಈಜುಗಾರರು ರಕ್ಷಿಸಿದ್ದಾರೆ. ಸದ್ಯ ಆಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಲಾಯ್ಡ್ ಡಿ.ಸೋಜಾ ಅಶ್ವಿತಾಳನ್ನು ಕಳೆದ 8 ವರ್ಷದಿಂದ ಪ್ರೀತಿಸುತ್ತಿದ್ದ. ಆದರೆ, ಈ ನಡುವೆ ಲಾಯ್ಡ್ ಇನ್ನೊರ್ವ ಯುವತಿಯನ್ನು ಪ್ರೀತಿಸುತ್ತಿದ್ದಾನೆ ಎಂದು ಅಶ್ವಿತಾಳ ಆರೋಪಿಸಿದ್ದಳು. ಈ ಹಿನ್ನೆಲೆ ಮಾತುಕತೆಗೆ ಸೋಮೇಶ್ವರ ಸಮುದ್ರ ತೀರಕ್ಕೆ ಬಂದಿದ್ದರು. ಈ ವೇಳೆ, ಲಾಯ್ಡ್ ಮತ್ತು ಅಶ್ವಿತಾಳ ನಡುವೆ ಮಾತಿನ ಚಕಮಕಿ ನಡೆದ್ದು, ಆಕೆ ಸಮುದ್ರಕ್ಕೆ ಹಾರಿದ್ದಾಳೆ. ಆಕೆಯನ್ನು ರಕ್ಷಿಸುವ ಭರದಲ್ಲಿ ಲಾಯ್ಡ್ ಕೂಡ ಸಮುದ್ರಕ್ಕೆ ಹಾರಿದ್ದಾನೆ.

- Advertisement -

ಆದರೆ, ಲಾಯ್ಡ್ ಡಿ‌ಸೋಜಾ ಸಮುದ್ರದಲ್ಲಿ‌ ಮುಳುಗಿದ್ದು, ಆತನನ್ನು ರಕ್ಷಣೆಗೆ ಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp