ಯಡಿಯೂರಪ್ಪ ಸೇದಿ ಬಿಸಾಕಿದ ಬೀಡಿ: ಸಿಎಂ ಇಬ್ರಾಹಿಂ

Prasthutha|

ಕೊಪ್ಪಳ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸೇದಿ ಬಿಸಾಕಿದ ಬೀಡಿಯಂತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

- Advertisement -

ಯಡಿಯೂರಪ್ಪ ಎಂಬ ಬೀಡಿಯನ್ನು ಸೇದಿ ಬಿಜೆಪಿಯವರು ಎಸೆದಿದ್ದರು, ಇದೀಗ ಅದೇ ಬೀಡಿಯನ್ನು ಸೇದಲು ಹೊರಟಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಯಡಿಯೂರಪ್ಪರಿಗೆ ಏನು ಮರ್ಯಾದೆ ಕೊಟ್ಟಿದ್ದಾರೆ, ಮುಖ್ಯಮಂತ್ರಿಯನ್ನು ತೆಗೆದು ಹೇಗೆ ಹೊರಗೆ ಎಸೆದಿದ್ದಾರೆ ಎಲ್ಲ ನೋಡಿದ್ದೇವೆ, ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದರು.
ಮುಂಬರುವ ದಿನಗಳಲ್ಲಿ ಜೆಡಿಎಸ್ ಪ್ರಬಲವಾಗಲಿದೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು, ಮುಸ್ಲಿಮರು, ದಕ್ಷಿಣ ಕರ್ನಾಟಕದಲ್ಲಿ ಮುಸ್ಲಿಮರು ಮತ್ತು ಒಕ್ಕಲಿಗರು ಒಂದಾಗಿದ್ದಾರೆ. ನವೆಂಬರ್ ತಿಂಗಳ ನಂತರ ನೋಡಿ ಜೆಡಿಎಸ್ ಏನು ಎಂಬುವುದು ಗೊತ್ತಾಗಲಿದೆ ಎಂದು ಹೇಳಿದರು.



Join Whatsapp