ಯಾರು ಕೈಯಲ್ಲಿ ಆಯುಧ ಹೊಂದುವನೋ ಅವನೇ ಪುರುಷ: ದ್ವೇ಼ಷ ಭಾಷಣದ ಮೂಲಕ ಹಿಂದೂಗಳನ್ನು ಪ್ರಚೋದಿಸಿದ ಯತಿ ನರಸಿಂಹಾನಂದ

Prasthutha|

ಹೊಸದಿಲ್ಲಿ: ದ್ವೇ಼ಷ ಭಾಷಣದ ಮೂಲಕವೇ ಖ್ಯಾತಿ ಹೊಂದಿರುವ ಯತಿ ನರಸಿಂಹಾನಂದ ಮತ್ತೊಮ್ಮೆ ವಿವಾದ ಭಾಷಣದ ಮೂಲಕ ಸುದ್ದಿಯಾಗಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಜನಾಂಗೀಯ ವಿರೋಧಿ ಭಾಷಣ ಮಾಡಿದ ವಿಡಿಯೋ ವೈರಲ್ ಆಗಿದೆ.

- Advertisement -

ದೆಹಲಿಯ ಬುರಾರಿ ಮೈದಾನದಲ್ಲಿ ಆಯೋಜಿಸಲಾಗಿದ್ದಹಿಂದೂ ಮಹಾಪಂಚಾಯತ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ನರಸಿಂಹಾನಂದ, ಈ ದೇಶದಲ್ಲಿ ಮುಸ್ಲಿಂ ಪ್ರಧಾನಿ ಆಯ್ಕೆಯಾದರೆ ಇಲ್ಲಿನ ಶೇ.40ರಷ್ಟು ಹಿಂದೂಗಳು ಸಾಯಬಹುದು, ಇದು ಹಿಂದೂಗಳ ಭವಿಷ್ಯ, ಇವುಗಳನ್ನು ಬದಲಿಸಬೇಕಿದ್ದರೆ ನೀವು ಮೊದಲು ಮನುಷ್ಯರಾಗಿ, ಯಾರು ಕೈಯಲ್ಲಿ ಆಯುಧ ಹೊಂದುವವನೋ ಅವನೇ ಪುರುಷ ಎಂದು ಮುಸ್ಲಿಮರ ವಿರುದ್ದ ಹಿಂದೂಗಳು ಆಯುಧ ಹೊಂದುವಂತೆ ಪ್ರಚೋದಿಸಿದ್ದಾನೆ.

ವರದಿಗಾಗಿ ತೆರಳಿದ್ದ ಮೂವರು ಮುಸ್ಲಿಂ ಪತ್ರಕರ್ತರನ್ನು ಥಳಿಸಿದ ಗುಂಪು:
ಯತಿನರಸಿಂಹಾನಂದ ಭಾಗವಹಿಸಿದ್ದ ಕಾರ್ಯಕ್ರಮವನ್ನು ವರದಿ ಮಾಡಲು ತೆರಳಿದ್ದ ಮೂವರು ಮುಸ್ಲಿಂ ಪತ್ರಕರ್ತರ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮೀರ್‌ ಫೈಸಲ್‌, ಎಮ್‌ ಡಿ ಮೆಹರಬಾನ್‌ ಹಾಗೂ ಅರ್ಬಾಬ್‌ ಅಲಿ ದಾಳಿಗೊಳಗಾದ ಪತ್ರಕರ್ತರು ಎಂದು ಗುರುತಿಸಲಾಗಿದೆ. ಕಾರ್ಯಕ್ರಮದ ವೀಡಿಯೊ ತುಣುಕನ್ನು ಚಿತ್ರೀಕರಿಸಿದ ವಿಚಾರಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Join Whatsapp