ಕತ್ತಲಾದ ಮೇಲೆ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಬೇಡಿ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ಮೌರ್ಯ

Prasthutha|

ಲಖನೌ: ಕತ್ತಲಾದ ನಂತರ ಪೊಲೀಸ್ ಠಾಣೆಗಳಿಗೆ ಮಹಿಳೆಯರು ಹೋಗಬಾರದು ಎಂದು ಉತ್ತರಾಖಂಡದ ಮಾಜಿ ರಾಜ್ಯಪಾಲೆ ಹಾಗೂ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಮೌರ್ಯ ಹೇಳಿದ್ದಾರೆ. ಇವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

- Advertisement -

ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿ ಕ್ಷೇತ್ರದಲ್ಲಿ ಸಂತ ರವಿದಾಸ್ ಮಂಡಲದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮೌರ್ಯ ಪಾಲ್ಗೊಂಡು ಮಾತನಾಡಿದ್ದರು. ‘ಪೊಲೀಸ್ ಠಾಣೆಯಲ್ಲಿ ಮಹಿಳಾ ಅಧಿಕಾರಿಗಳು ಇದ್ದರೂ, ಮಹಿಳೆಯರು ಮುಸ್ಸಂಜೆ ಅಥವಾ ಸಂಜೆಯ ನಂತರ ಪೊಲೀಸ್ ಠಾಣೆಗೆ ಹೋಗಬಾರದು. ಅಗತ್ಯವಿದ್ದರೆ, ತಂದೆ-ಸಹೋದರ, ಪತಿ ಜತೆ ಮಾತ್ರ ಅಲ್ಲಿಗೆ ಹೋಗಬೇಕು ಎಂದಿದ್ದರು.

ಬೇಬಿ ರಾಣಿ ಮೌರ್ಯ ಅವರ ಈ ಹೇಳಿಕೆಯನ್ನು ಕಾಂಗ್ರೆಸ್​ನ ರಾಜ್ಯ ವಕ್ತಾರ ಅಂಶು ಅವಸ್ಥಿ ಟೀಕಿಸಿದ್ದು, ಬೇಬಿಯವರ ಈ ಹೇಳಿಕೆ ಬಿಜೆಪಿ ಮತ್ತು ಆರ್​ಎಸ್​​ಎಸ್​ನ ಮನಸ್ಥಿತಿಯನ್ನು ಬಿಂಬಿಸುತ್ತದೆ. ಮಹಿಳೆಯರು ಐದು ಗಂಟೆಯ ನಂತರ ಯಾಕೆ ಠಾಣೆಗಳಿಗೆ ಹೋಗಬಾರದು? ರಾಜ್ಯದಲ್ಲಿ ಜಂಗಲ್ ರಾಜ್ ಸರ್ಕಾರ ಚಾಲ್ತಿಯಲ್ಲಿದೆಯೇ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

. ‘ಪೊಲೀಸ್ ಠಾಣೆಯಲ್ಲಿ ಮಹಿಳಾ ಅಧಿಕಾರಿಗಳು ಇದ್ದರೂ, ಮಹಿಳೆಯರು ಮುಸ್ಸಂಜೆ ಅಥವಾ ಐದು ಗಂಟೆಯ ನಂತರ ಪೊಲೀಸ್ ಠಾಣೆಗೆ ಹೋಗಬಾರದು. ಅಗತ್ಯವಿದ್ದರೆ, ತಂದೆ-ಸಹೋದರ, ಪತಿ ಜತೆ ಮಾತ್ರ ಅಲ್ಲಿಗೆ ಹೋಗಬೇಕು ಎಂದಿದ್ದರು.  

Join Whatsapp