ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಪದಗ್ರಹಣ ಕಾರ್ಯಕ್ರಮ

Prasthutha|

ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಪದಗ್ರಹಣ ಕಾರ್ಯಕ್ರಮ ಜೂ.15ರಂದು ಗುರುವಾರ ಬಿ.ಸಿ. ರೋಡಿನ ಕೈಕಂಬದಲ್ಲಿ ನಡೆಯಿತು.

- Advertisement -

ನಸ್ರಿಯಾ ಬೆಳ್ಳಾರೆಯ ಸಭಾಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಳೆದ ಅವಧಿಯ ವರದಿಯನ್ನು ಮಂಡಿಸಲಾಯಿತು.

ಕಾರ್ಯಕ್ರಮವನ್ನು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ರವರು ಉದ್ಘಾಟಿಸಿದರು.

- Advertisement -

ಜಿಲ್ಲಾಧ್ಯಕ್ಷೆಯಾಗಿ ನೌರೀನ್ ಆಲಂಪಾಡಿ, ಉಪಾಧ್ಯಕ್ಷರಾಗಿ ಝಹನಾ ಬಂಟ್ವಾಳ ಹಾಗೂ ವೀಣಾ ಬಜ್ಪೆ, ಪ್ರಧಾನ ಕಾರ್ಯದರ್ಶಿಯಾಗಿ  ನಿಶಾ ಮೂಡುಶೆಡ್ಡೆ, ಕಾರ್ಯದರ್ಶಿಗಳಾಗಿ ಅಝ್ವೀನ ಕಾಟಿಪಳ್ಳ ಹಾಗೂ ಜಯಲಕ್ಷ್ಮಿ, ಕೋಶಾಧಿಕಾರಿಯಾಗಿ ಶಾಕಿರಾ ಬಜ್ಪೆ‌ ಹಾಗೂ ಸಮಿತಿ ಸದಸ್ಯರುಗಳಾಗಿ ಸಂಶಾದ್, ಖತೀಜ, ಶಾಲೆಟ್, ಸಫಿಯ,ತೌಸೀನ, ವೀರಾ ಡಿಸೋಜ, ಹಾಝರಾ,ಶಹನಾಝ್ ಆಯ್ಕೆಯಾಗಿರುತ್ತಾರೆ.

ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರವರು ಸಮಾರೋಪ ಭಾಷಣಗೈದರು. ರಾಜ್ಯ ಸಮಿತಿ ಸದಸ್ಯೆ ನಾಝಿಯಾ ಉಡುಪಿ ಇವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಸಹ್ಲ ತುಂಬೆ ಕಾರ್ಯಕ್ರಮವನ್ನು ನಿರೂಪಿಸಿದರು.

Join Whatsapp