ಪಿ.ಜಿಗೆ ನುಗ್ಗಿ ಯುವತಿ ಕೊಲೆ: ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ

Prasthutha|

ಬೆಂಗಳೂರು: ಪಿ.ಜಿಗೆ ನುಗ್ಗಿ ಯುವತಿ ಕೊಲೆ ಮಾಡಿದ್ದ ಆರೋಪಿ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿ, ಶೋಧ ಆರಂಭಿಸಿದ್ದಾರೆ.

- Advertisement -


ಕೋರಮಂಗಲದ ವಿ.ಆರ್.ಲೇಔಟ್ ನ ಪಿ.ಜಿಗೆ ನುಗ್ಗಿ ಬಿಹಾರದ ಕೃತಿಕುಮಾರಿ (24) ಅವರನ್ನು ಕೊಲೆ ಮಾಡಲಾಗಿತ್ತು. ಮಂಗಳವಾರ ತಡರಾತ್ರಿ ಘಟನೆ ನಡೆದಿತ್ತು.


ನಗರದ ಖಾಸಗಿ ಕಂಪನಿಯಲ್ಲಿ ಕೃತಿಕುಮಾರಿ ಕೆಲಸ ಮಾಡುತ್ತಿದ್ದರು. ತಡರಾತ್ರಿ ಚಾಕು ಹಿಡಿದು ಪಿ.ಜಿಯೊಳಗೆ ನುಗ್ಗಿದ ಆರೋಪಿ, 3ನೇ ಮಹಡಿಯಲ್ಲಿನ ಕೊಠಡಿ ಸಮೀಪದಲ್ಲೇ ಯುವತಿ ಮೇಲೆ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೈದು ಪರಾರಿಯಾಗಿದ್ದಾನೆ.



Join Whatsapp