ಹಿಂದೂ ಏಕ್ತಾ ಮಂಚ್ ಕಾರ್ಯಕ್ರಮದ ವೇದಿಕೆಯಲ್ಲಿ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ

Prasthutha|

ನವದೆಹಲಿ: ಹಿಂದೂ ಏಕ್ತಾ ಮಂಚ್ ನ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಹೊಡೆದ ಘಟನೆ ದೆಹಲಿಯ ಚತ್ತರ್ಪುರದಲ್ಲಿ ನಡೆದಿದೆ.

- Advertisement -

ಶ್ರದ್ಧಾ ವಾಕರ್ ಗೆ ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಹಿಂದೂ ಏಕ್ತಾ ಮಂಚ್ ‘ಬೇಟಿ ಬಚಾವೋ ಮಹಾಪಂಚಾಯತ್’ ಎಂಬ ಕಾರ್ಯಕ್ರಮವನ್ನು ದೆಹಲಿಯ ಚತ್ತರ್ಪುರದಲ್ಲಿ ಏರ್ಪಡಿಸಿತ್ತು.

ಕಾರ್ಯಕ್ರಮ ನಡೆಯುತ್ತಿರುವಾಗ, ಮಹಿಳೆಯೊಬ್ಬಳು ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆಯನ್ನು ಏರಿದ್ದಳು. ಮಾತನಾಡಲು ಆಸ್ಪದ ನೀಡದ್ದಕ್ಕಾಗಿ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ ಎನ್ನಲಾಗಿದೆ.

- Advertisement -

ವೇದಿಕೆಯಲ್ಲಿದ್ದ ಇತರ ಜನರು ಮಧ್ಯಪ್ರವೇಶಿಸಿ ಮಹಿಳೆಯನ್ನು ತಡೆದಿದ್ದು, ಘಟನೆಯ ಬಗ್ಗೆ ತಮಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp