ಮುಸ್ಲಿಮರಾಣೆ, ಮತ್ತೆ ಬಿಜೆಪಿ ಸೇರುವುದಿಲ್ಲ- ನಿತೀಶ್ ಕುಮಾರ್

Prasthutha|

ಪಾಟ್ನ: ಮುಸ್ಲಿಮರಾಣೆಗೆ ಹೇಳುತ್ತಿದ್ದೇನೆ ಇನ್ನೆಂದೂ ನಾನು ಬಿಜೆಪಿ ಜೊತೆಗೆ ಸೇರುವುದಿಲ್ಲ. ಹಾಗೆ ಪರಿಸ್ಥಿತಿ ಬಂದರೆ ಅದರ ಬದಲು ಸಾವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

- Advertisement -

ಅವರು ಪಾಟ್ನಾದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಗೆ ಬಿಹಾರದಲ್ಲಿ ನೆಲೆ ಇರಲಿಲ್ಲ. ಅದಕ್ಕೆ ರಾಜ್ಯದಲ್ಲಿ ನೆಲೆ ಒದಗಿಸಿದ್ದಕ್ಕೆ ನಾನು ಒಬಿಸಿ ಜನರ ಕ್ಷಮೆ ಕೋರುತ್ತೇನೆ ಎಂದರು.

ಬಿಜೆಪಿ 2024ರ ಲೋಕಸಭಾ ಚುನಾವಣೆಯಲ್ಲಿ ಮುಕ್ಕಾಲು ಪಾಲು ಲೋಕಸಭಾ ಸ್ಥಾನ ಗೆಲ್ಲುವುದಾಗಿ ಹೇಳುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಜೊತೆಗಿಲ್ಲದಿದ್ದರೆ ಅವರು ಬಿಹಾರದಲ್ಲಿ ಸೊನ್ನೆ ಎಂದರು.

- Advertisement -

ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆಯಲ್ಲ. ಅದು ಆರೋಪ ಅಷ್ಟೆ, ಆ ಆರೋಪ ಮಾಡಿದವರು ಮಹಾ ಭ್ರಷ್ಟ ಬಿಜೆಪಿಯವರು ಎಂದು ನಿತೀಶ್ ಕುಮಾರ್ ತಿರುಗೇಟು ನೀಡಿದರು.

Join Whatsapp