ಕೇರಳದಲ್ಲಿ CAA ಜಾರಿ ಇಲ್ಲ, ನಿಲುವಿನಲ್ಲಿ ಬದಲಾವಣೆಯೂ ಇಲ್ಲ : ಪಿಣರಾಯಿ ವಿಜಯನ್

Prasthutha|

ತಿರುವನಂತಪುರ: ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಯನ್ನು ಜಾರಿ ಮಾಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.

- Advertisement -

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ, ಆರಂಭದಿಂದಲೇ ಎಡ ಪಕ್ಷದ ಸರಕಾರಗಳು ತೆಗೆದುಕೊಂಡಿರುವ ನಿಲುವು ಇದು, ನಾವು ಯಾವುದೇ ಕಾರಣಕ್ಕೂ ಸಿಎಎಯನ್ನು ಕೇರಳದಲ್ಲಿ ಜಾರಿಗೊಳಿಸುವುದಿಲ್ಲ ಎಂದರು.

ಕೇಂದ್ರ ಸರಕಾರವು ಜನರನ್ನು ಧರ್ಮಗಳ ಆಧಾರದಲ್ಲಿ ವಿಭಜಿಸಲು ಸಿಎಎ ಯನ್ನು ಜಾರಿಗೊಳಿಸಿವೆ, ಆದರೆ ನಮ್ಮ ರಾಷ್ಟ್ರದಲ್ಲಿ ಧರ್ಮಗಳ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದರು. ಧರ್ಮಗಳಲ್ಲಿ ನಂಬಿಕೆ ಇಡುವುದು ಅಥವಾ ನಂಬಿಕೆ ಇಡದೇ ಇರುವುದು ಪ್ರತಿಯೊಬ್ಬನ ಹಕ್ಕು ಎಂದು ಪ್ರತಿಪಾದಿಸಿದ ವಿಜಯನ್, CAAಯನ್ನು ಜಾರಿಗೊಳಿಸುವುದಿಲ್ಲವೆಂದು ನಾವು ಅಂದೇ ನಿರ್ಧಾರ ತೆಗೆದುಕೊಂಡಿದ್ದೇವೆ, ಇಂದೂ ಅದೇ ನಿರ್ಧಾರ, ನಾಳೆಯೂ ಅದೇ ನಿರ್ಧಾರವಾಗಲಿದೆ ಎಂದರು

Join Whatsapp