ಮೃತ ಬಿಪಿನ್ ರಾವತ್ ಅವರನ್ನು ‘ ಪತ್ರಕರ್ತ ವಿ ಕೆ ಸಿಂಗ್’ ಎಂದು ಉಲ್ಲೇಖಿಸಿದ ಪತ್ರಕರ್ತ ದೀಪಕ್ ಚೌರಾಸಿಯಾ !

Prasthutha|

ತೊದಲುತ್ತಾ ನಿರೂಪಣೆ ಮಾಡುತ್ತಿದ್ದ ದೀಪಕ್ ಕುಡಿದು ಬಂದಿದ್ದಾರೆಂದ ನೆಟ್ಟಿಗರು !

- Advertisement -

ನವದೆಹಲಿ: ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ‘ನ್ಯೂಸ್ ನೇಷನ್ ‘ ನಿರೂಪಕ ವಿಚಿತ್ರವಾಗಿ ವರ್ತಿಸಿದ್ದು, ಬಿಪಿನ್ ರಾವತ್ ಅವರನ್ನು ಪತ್ರಕರ್ತ ವಿ ಕೆ ಸಿಂಗ್ ಎಂದು ಉಲ್ಲೇಖಿಸಿದ ಆ್ಯಂಕರ್ ದೀಪಕ್ ಚೌರಾಸಿಯಾ ನಡೆಗೆ ನೆಟ್ಟಿಗರು ಕುಡಿದ ಅಮಲಿನಲ್ಲಿ ಟಿವಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

ಹೆಲಿಕಾಪ್ಟರ್ ದುರಂತದ ಕುರಿತ ನೇರ ಪ್ರಸಾರದ ವೇಳೆ ಟಿವಿ ನಿರೂಪಕ ದೀಪಕ್ ಜನರಲ್ ರಾವತ್ ಅವರ ಬದಲು ವಿ ಕೆ ಸಿಂಗ್ ಅವರ ಸೇವೆಯನ್ನು ಕೊಂಡಾಡಬೇಕಾಗಿದೆ. ಸರ್ಜಿಕಲ್ ಸ್ಟ್ರೈಕ್, ದೇಶ ಸೇವೆಯಲ್ಲಿ ವಿ ಕೆ ಸಿಂಗ್ ಅವರ ಕೊಡುಗೆ ಅಪಾರ ಎಂದು ತೊದಲುತ್ತಲೇ ಮಾತನಾಡುತ್ತಾ ಚಡಪಡಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕಾರ್ಯಕ್ರಮದ ಬಳಿಕ ಇದ್ದ ಅವರ ‘ದೇಶ್ ಕಿ ಬೆಹಸ್’ ಕಾರ್ಯಕ್ರಮ ಕೂಡಾ ರದ್ದಾಗಿದ್ದುದು ಹಲವರ ಸಂಶಯಗಳಿಗೆ ಕಾರಣವಾಗಿತ್ತು.

- Advertisement -

ಈ ಕುರಿತು ನಿರೂಪಕ ದೀಪಕ್ ಅವರ ಈ ವರ್ತನೆಗೆ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ, ಕಾಲೆಳೆದಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp