ನೀನು ಹೀಗೇಕೆ ಮಾಡಿದೆ?: ಸುಚನಾಗೆ ಏರುಧ್ವನಿಯಲ್ಲಿ ಕೇಳಿದ ಮೃತ ಮಗುವಿನ ತಂದೆ

Prasthutha|

ಪಣಜಿ: “ನನ್ನ ಮಗುವನ್ನು ನೀನು ಏನು ಮಾಡಿದ್ದೀಯಾ, ನನ್ನ ಮೇಲಿನ ಸಿಟ್ಟಿಗೆ ಮಗುವನ್ನು ಏಕೆ ಕೊಂದು ಹಾಕಿದೆ. ಅಂತಹ ಮನಸ್ಸಾದರೂ ನಿನಗೆ ಹೇಗೆ ಬಂದಿತು… ” ಹೀಗೆ ನಾಲ್ಕು ವರ್ಷದ ಮಗುವನ್ನು ಕೊಂದ ಸುಚನಾ ಸೇಠ್‌ಗೆ ಆಕೆಯ ಪತಿ, ಇಂಡೋನೇಷಿಯಾದಿಂದ ಬಂದಿರುವ ವೆಂಕಟರಮಣ ಏರುಧ್ವನಿಯಲ್ಲಿ ಕೇಳಿದ ಘಟನೆ ನಡುವೆ ನಡೆದ ಗೋವಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.

- Advertisement -

ವೆಂಕಟರಮಣ ಕೇಳುತ್ತಲೇ ಇದ್ದರೂ ಸುಚನಾ “ನನಗೇನೂ ಗೊತ್ತಿಲ್ಲ. ನಾನೇನು ಮಾಡಿಲ್ಲ” ಎಂಬ ಉತ್ತರ ಮಾತ್ರ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದು ಐದು ದಿನದ ಹಿಂದೆ ಮಗುವಿನ ಮೃತ ದೇಹವನ್ನು ಗೋವಾದಿಂದ ಸಾಗಿಸುವಾಗ ಚಿತ್ರದುರ್ಗ ಬಳಿ ಸಿಕ್ಕಿಬಿದ್ದ ಬೆಂಗಳೂರಿನ ಕಂಪೆನಿಯೊಂದರ ಸಿಇಒ ಸುಚನಾ ಸೇಥ್‌ ಹಾಗೂ ಆಕೆಯ ಪತಿಗೆ ಮುಕ್ತ ಮಾತುಕತೆಗೆ ಪೊಲೀಸರು ಅವಕಾಶ ಕಲ್ಪಿಸಿದ್ದರು. ಇಬ್ಬರ ನಡುವೆ ಏರಿದ ದನಿಯಲ್ಲೇ ಮಾತಿನ ಸಂಘರ್ಷವೇ ಇತ್ತು. ವೆಂಕಟರಮಣ ಮಗು ಮೃತಪಟ್ಟ ಬಗ್ಗೆ ದುಃಖದಲ್ಲಿಯೇ ಮಾತನಾಡಿದರೆ ಸುಚನಾ ಮುಖಭಾವದಲ್ಲಿ ಅಂತಹ ಬೇಸರವೇನೂ ಕಂಡು ಬರಲಿಲ್ಲ.

- Advertisement -

ನಾಲ್ಕು ದಿನದಿಂದ ಗೋವಾದ ಕಲ್ಲಂಗೂಟ್‌ ಪೊಲೀಸರ ವಶದಲ್ಲಿರುವ ಸುಚನಾ ಸೇಥ್‌ ಅವರ ನಿರಂತರ ವಿಚಾರಣೆ ನಡೆದಿದೆ. ಘಟನೆ ನಡೆದ ಸ್ಥಳ, ಅಲ್ಲಿನ ಘಟನಾವಳಿಗಳ ಕುರಿತು ನಿಖರ ಮಾಹಿತಿಯನ್ನು ಪೊಲೀಸರು ಪಡೆಯುತ್ತಿದ್ದಾರೆ. ಸುಚನಾ ಸಮರ್ಪಕವಾಗಿ ಏನನ್ನೂ ಹೇಳುತ್ತಿಲ್ಲ ಎನ್ನುವ ಅಭಿಪ್ರಾಯ ಗೋವಾ ಪೊಲೀಸರಿಂದ ಬರುತ್ತಿದೆ.

ವೆಂಕಟರಮಣ ಅವರನ್ನು ಗೋವಾ ಪೊಲೀಸರ ಮುಂದೆ ಹಾಜರುಪಡಿಸಿ ತನಿಖೆಯ ಭಾಗವಾಗಿ ತನಿಖಾಧಿಕಾರಿ (ಐಒ) ಪರೇಶ್ ನಾಯಕ್ ಅವರ ಮುಂದೆ ಹೇಳಿಕೆ ದಾಖಲಿಸಿದ ನಂತರ ಈ ಮಾತಿನ ಚಕಮಕಿ ನಡೆದಿದೆ. ವೆಂಕಟರಮಣ ಅವರು ಡಿಸೆಂಬರ್ 10 ರಂದು ತಮ್ಮ ಮಗನನ್ನು ಕೊನೆಯ ಬಾರಿಗೆ ಭೇಟಿಯಾಗಿದ್ದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕಳೆದ ಐದು ಭಾನುವಾರಗಳಿಂದ ತಮ್ಮ ಮಗುವನ್ನು ಭೇಟಿಯಾಗಲು ಸುಚನಾ ಅವಕಾಶ ನೀಡಲಿಲ್ಲ ಎಂದು ಹೇಳಿಕೆ ದಾಖಲಿಸಿದ್ದಾರೆ.

Join Whatsapp