ಸ್ಪೀಕರ್ ಪೀಠಕ್ಕೆ ಕಾಗೇರಿ ಅವಮಾನ ಮಾಡಿದಾಗ ತಾವು ಎಲ್ಲಿದ್ರಿ?: ಸಿಟಿ ರವಿಗೆ ರಿಯಾಝ್ ಕಡಂಬು ತಿರುಗೇಟು

Prasthutha|

ಮಂಗಳೂರು: ಮಾಜಿ ಸ್ಪೀಕರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು RSS ಬಗ್ಗೆ ಹೊಗಳಿ ಮಾತನಾಡಿ ಪೀಠಕ್ಕೆ ಅವಮಾನ ಮಾಡಿದಾಗ  ತಾವು ಎಲ್ಲಿದ್ರಿ ಎಂದು ಎಂಎಲ್ ಸಿ ಸಿಟಿ ರವಿ ಟ್ವೀಟ್‌ಗೆ ಎಸ್ ಡಿಪಿಐ ಮುಖಂಡ ರಿಯಾಝ್ ಕಡಂಬು ತಿರುಗೇಟು ನೀಡಿದ್ದಾರೆ.

- Advertisement -

ಸ್ಪೀಕರ್‌ ಪೀಠಕ್ಕೆ ಅದರದ್ದೇ ಆದ ಗೌರವವಿದೆ, ಘನತೆಯಿದೆ. ಸ್ಪೀಕರ್‌ ರಾಜಕೀಯ ರಹಿತರಾಗಿರಬೇಕು. ಆದರೆ ನಮ್ಮ ಸ್ಪೀಕರ್‌ ಯು.ಟಿ. ಖಾದರ್ ಅವರು ಸದನದ ನಿಯಮಾವಳಿಗಳೆಲ್ಲವನ್ನೂ ಗಾಳಿಗೆ ತೂರಿದ್ದಾರೆ ಎಂದು ಸಿಟಿ ರವಿ‌ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ತಿರುಗೇಟು ನೀಡಿದ ರಿಯಾಝ್ ಕಡಂಬು, ನಿಮ್ಮ ಪಕ್ಷದ ಕಾಗೇರಿಯವರು ಸಭಾಧ್ಯಕ್ಷರಿದ್ದಾಗ ಅತೀ ದೊಡ್ಡ ಭಯೋತ್ಪಾದಕ ಸಂಘಟನೆ RSS ಅನ್ನು ಹೊಗಳಿ ಮಾತಾಡಿ ಪೀಠಕ್ಕೆ ಅವಮಾನ ಮಾಡಿದಾಗ ಎಲ್ಲಿದ್ರಿ ತಾವು?. ಪಾರ್ಲಿಮೆಂಟ್ ಪೀಠದಲ್ಲಿ ಕೂತು ರಾಹುಲ್ ಗಾಂಧೀ ಮಾತಾಡುವಾಗ ಮೈಕ್ ಆಫ್ ಮಾಡ್ತಾರಲ್ಲಾ ಬಿರ್ಲಾ ಅವರು ಅವಾಗ ಆದಷ್ಟು ದೊಡ್ಡ ಅವಮಾನವೇನು ಈ ಫೋಟೋ ಕ್ಲಿಕ್ಕಿಸಿದಾಗ ಆಗಿಲ್ಲ ಬಿಡಿ ಎಂದು ಬರೆದುಕೊಂಡಿದ್ದಾರೆ.



Join Whatsapp