ಪೊಲೀಸ್ ಠಾಣೆಗೆ ನುಗ್ಗಿ ಬೆದರಿಕೆ ಹಾಕಿದ ಶಾಸಕ ಪೂಂಜಾನ ಬಂಧನ ಯಾವಾಗ ?: ಅನ್ವರ್ ಸಾದತ್

Prasthutha|

ಮಂಗಳೂರು: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಮತ್ತು ಅವರ ಅಪ್ಪಂದಿರಿಗೂ ಬೆದರಿಕೆ ಹಾಕಿದ ಶಾಸಕ ಪೂಂಜಾನ ಬಂಧನ ಯಾವಾಗ ಎಂದು ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.

- Advertisement -


ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಅಕ್ರಮ ಮರಳುಗಾರಿಕೆ ಮತ್ತು ಸ್ಪೋಟಕ ಹೊಂದಿದ್ದ ಅರೋಪದಲ್ಲಿ ಪೊಲೀಸರು ಬಂಧಿಸಿದ ಬಿಜೆಪಿ ಪಕ್ಷದ ಕಾರ್ಯಕರ್ತನ ಪರವಾಗಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಮತ್ತು ಅವರ ಅಪ್ಪಂದಿರಿಗೂ ಬೆದರಿಕೆ ಹಾಕಿದ ಶಾಸಕ ಪೂಂಜಾನ ಬಂಧನ ಯಾವಾಗ ?? ಮುಸ್ಲಿಮರ ವಿರುದ್ಧ ಅನ್ಯಾಯ, ತಾರತಮ್ಯ ನಡೆದಾಗ ಪ್ರಭುತ್ವದ ವಿರುದ್ಧ ಬೀದಿಯಲ್ಲಿ ಹೋರಾಟ ನಡೆಸಿದವರ ತಲೆ ಮೇಲೆ ಒಡೆದು ರಕ್ತ ಬರುವಂತೆ ಲಾಠಿ ಚಾರ್ಜ್ ನಡೆಸಿ, IPC ಯಲ್ಲಿರುವ ಎಲ್ಲಾ ಸೆಕ್ಷನ್ ಗಳನ್ನು ಹಾಕಿ ಜೈಲಿಗೆ ತಳ್ಳುವ ಪೊಲೀಸರೆ ನಿನ್ನೆ ರಾತ್ರಿ ಪೂಂಜಾನ ನೇತೃತ್ವದಲ್ಲಿ ಠಾಣೆಯೊಳಗೆ ನುಗ್ಗಿ ನಿಮಗೂ ನಿಮ್ಮ ಹೆತ್ತವರಿಗೂ ಧಮ್ಕಿ ಹಾಕುವಾಗ ನಿಮ್ಮ ಲಾಠಿಗೆ ಗೆದ್ದಲು ಹಿಡಿದಿತ್ತಾ ಎಂದು ಹೇಳಿದ್ದಾರೆ.



Join Whatsapp