ಪರೇಶ್ ಮೇಸ್ತಾ ಪ್ರಕರಣ | ಮಾಧ್ಯಮಗಳ ಮೂಲಕ ಅರಚಾಡಿದ್ದ ಬಿಜೆಪಿಯವರು ಈಗ ಏನು ಹೇಳುತ್ತಾರೆ: ಎಚ್.ಸಿ. ಮಹದೇವಪ್ಪ

Prasthutha|

ಬೆಂಗಳೂರು: ಪರೇಶ್ ಮೇಸ್ತಾ ಸಾವನ್ನು ಹಿಂದೂಗಳ ಹತ್ಯೆ ಎಂದು ಬೀದಿಗಳಲ್ಲಿ ಹಾಗೂ ಮಾಧ್ಯಮಗಳ ಮೂಲಕ ಅರಚಾಡಿದ್ದ ಬಿಜೆಪಿಗರು ಈಗ ಏನು ಹೇಳುತ್ತಾರೆ ಎಂದು ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಪ್ರಶ್ನಿಸಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಇದರ ಜೊತೆಗೆ ಇತ್ತೀಚೆಗೆ ಪರೇಶ್ ಮೇಸ್ತಾ ಕೊಲೆ ಆರೋಪಿ ಎನ್ನಲಾದ ವ್ಯಕ್ತಿಯೋರ್ವನಿಗೆ ಸರ್ಕಾರದ ಒಳಗೆ ಸ್ಥಾನ ಕೊಟ್ಟ ಸುದ್ದಿ ಕೇಳಿದ್ದ ನನಗೆ, ಕೇಂದ್ರ ಸರ್ಕಾರದ ಕಪಿಮುಷ್ಟಿಗೆ ಸಿಲುಕಿರುವ ಸಿಬಿಐನ ತನಿಖೆ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂಬ ಅನುಮಾನವೂ ಕೂಡಾ ದಟ್ಟವಾಗಿದೆ” ಎಂದಿದ್ದಾರೆ.


ಈ ಸಂಗತಿಯ ಆಚೆಗೆ ಹಿಂದೂಗಳ ಹತ್ಯೆ ಎನ್ನುತ್ತಾ ಶವ ರಾಜಕೀಯ ಮಾಡುವ ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗಡೆ, ಸಿ ಟಿ ರವಿ, ಡಾಲರ್ ತಜ್ಞ ನಳೀನ್ ಕುಮಾರ್ ಅವರು ಈಗ ರಾಜ್ಯದ ಜನರ ಮುಂದೆ ಬಹಿರಂಗವಾಗಿ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದ್ದಾರೆ.



Join Whatsapp