ಶಾಲೆಗಳಲ್ಲಿ ಕೋಳಿ ಖಾದ್ಯ, ಹಣ್ಣು ಹಂಪಲು ನೀಡಲು ಪಶ್ಚಿಮ ಬಂಗಾಳ ಸರಕಾರ ನಿರ್ಧಾರ

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರಕಾರವು ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ಕೋಳಿ ಖಾದ್ಯ ಮತ್ತು ಹಣ್ಣು ಹಂಪಲು ನೀಡಲು ತೀರ್ಮಾನ ತೆಗೆದುಕೊಂಡಿದೆ. ಕೂಡಲೆ ಜಾರಿಗೆ ತರಲು ಅದಕ್ಕೆ ಹಣ ಬಿಡುಗಡೆಯನ್ನು ಕೂಡ ತೃಣಮೂಲ ಕಾಂಗ್ರೆಸ್ ಮಾಡಿದೆ.

- Advertisement -

ಯಾವ ಯಾವ ಕಾಲದಲ್ಲಿ ಯಾವ ಹಣ್ಣು ಹೆಚ್ಚು ಸಿಗುವುದೋ ಆ ಹಣ್ಣು ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಬಿಜೆಪಿ ಇದನ್ನು ಟೀಕಿಸಿದೆ. ಮುಂದಿನ ಗ್ರಾಮ ಪಂಚಾಯತಿ ಚುನಾವಣೆ ಹಾಗೂ ಅನಂತರದ ಲೋಕಸಭಾ ಚುನಾವಣೆ ಗುರಿಯಿಟ್ಟುಕೊಂಡು ಟಿಎಂಸಿ ಕೋಳಿ ಹಣ್ಣು ಜಾರಿಗೆ ತಂದಿದೆ ಎಂದು ಬಿಜೆಪಿ ಆಪಾದಿಸಿದೆ.

Join Whatsapp