ನಟ ಚೇತನ್ ಬಿಡುಗಡೆಗೊಳಿಸುವಂತೆ ವೆಲ್ಫೇರ್ ಪಾರ್ಟಿ ಆಗ್ರಹ

Prasthutha|

ಬೆಂಗಳೂರು: ಯುವ ಹೋರಾಟಗಾರ ಹಾಗೂ ನಟ ಚೇತನ ಬಂಧನ ಮಾಡಿರುವುದು ಖಂಡನೀಯ ಹಾಗೂ ಕೂಡಲೇ ಪ್ರಕರಣವನ್ನು ಹಿಂಪಡೆದು ಬಿಡುಗಡೆಗೊಳಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ಆಗ್ರಹಿಸಿದ್ದಾರೆ.

- Advertisement -

ದೇಶದ ಶೋಷಿತ ದಮನೀತ ಬಹುಸಂಖ್ಯಾತ ರೈತ ಕಾರ್ಮಿಕರ ಪರವಾಗಿ ನಿಂತ ಯುವ ಹೋರಾಟಗಾರ ನಟ ಚೇತನ್ ಬುಧವಾರದಂದು ಬಂಧನವಾಗಿದ್ದು ಖಂಡನೀಯವಾಗಿದೆ. ಚೇತನ್ ಹೋರಾಟಗಳನ್ನು ಸಹಿಸದ ಸರಕಾರ 502,504 ಪ್ರಕರಣವನ್ನು ದಾಖಲಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೋರಾಟ ನಡೆಸುವವರ ವಿರುದ್ಧ ಇದ್ದೇವೆ ಎಂದು ಎದ್ದು ತೋರಿಸಲಾಗಿದೆ.

ಮುಖ್ಯಮಂತ್ರಿ ಜನಪರ ಕಾಳಜಿ ವಹಿಸುತ್ತಿಲ್ಲ. ಸಚಿವ ಈಶ್ವರಪ್ಪ ದೇಶದ್ರೋಹಿ ಹೇಳಿಕೆ ನೀಡಿದರೂ ಕ್ರಮ ಜರುಗಿಸದೇ ನಟ ಚೇತನ್ ರನ್ನು ಬಂಧಿಸಿ ಪ್ರಕರಣ ದಾಖಲಿಸಿ ಜನರ ವಿಶ್ವಾಸ ಕಳೆದುಕೊಂಡಿದೆ ಎಂದರು.

- Advertisement -

ಕಳೆದ ದಶಕಗಳಿಂದ ಶೋಷಿತರ ಪರವಾಗಿ ನಿಲ್ಲುವ ಲೇಖಕರು, ಚಿಂತಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಹೊರಾಟಗಾರರ ಮೇಲೆ ಪ್ರಕರಣ ದಾಖಲಿಸುವುದು, ಹತ್ಯೆ ಗೈಯುವುದು ನಡೆಯುತ್ತಲೇ ಬಂದಿವೆ.

ಶನಿವಾರದಂದು ರಾಜಧಾನಿಯಲ್ಲಿ ನಡೆದ ಹೋರಾಟಕ್ಕೆ ಬೆಂಬಲಿಸಿದ ಹಾಗೂ ಹಿಜಾಬಗೆ ಸಂಬಂಧಪಟ್ಟ ಇನ್ನಿತರೆ ಹೊರಾಟಗಳಲ್ಲಿ ತೊಡಗಿದ ಇವರನ್ನು ಕಂಡ ಸರಕಾರ ಇವರ ಮೇಲೆ ಇಂತಹ ಕ್ರಮ ಜರುಗಿಸಿರುವುದು ಖಂಡನೀಯವಾಗಿದೆ. ಕೂಡಲೇ ಪ್ರಕರಣವನ್ನು ಹಿಂಪಡೆದು ಬಿಡುಗಡೆಗೊಳಿಸಬೇಕೆಂದು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ.

Join Whatsapp