ಕುಂಕುಮ ಜೊತೆಗೆ ಕೈಬಳೆ, ಕಿವಿಯೋಲೆ, ಮೂಗುಬೊಟ್ಟು ಬೇಕಿದ್ರೆ ಹಾಕಿಕೊಳ್ಳಿ: ಸಿಟಿ ರವಿಗೆ ಕಾಂಗ್ರೆಸ್‌ ಚಾಟಿ

Prasthutha|

ಬೆಂಗಳೂರು: ಕುಂಕುಮ ಬೇಡ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ಹಿಂದೂನಾ? ಎಂದು ಪ್ರಶ್ನಿಸಿದ್ದ ಮಾಜಿ ಶಾಸಕ ಸಿಟಿ ರವಿಗೆ ಕಾಂಗ್ರೆಸ್‌ ವ್ಯಂಗ್ಯವಾಗಿ ತಿರುಗೇಟು ನೀಡಿದೆ. ಕುಂಕುಮ ಹಾಕಿಕೊಳ್ಳುವುದರಿಂದ ಯಾರೂ ಹಿಂದುವಾಗುವುದಿಲ್ಲ. ನೀವು ಬೇಕಿದ್ದರೆ ಹಿಂದೂ ಎಂದು ತೋರಿಸಿಕೊಳ್ಳಲು ಬಳೆ, ಓಲೆನೂ ಹಾಕ್ಕಿಳ್ಳಿ ಎಂದು ಹೇಳಿದೆ.

- Advertisement -

ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್‌, ಸೋತು ಸುಣ್ಣವಾಗಿರುವ ಅಬ್ಬೆಪಾರಿ ಸಿಟಿ ರವಿ ಅವರೇ, ಕುಂಕುಮ ಹಾಕಿಕೊಳ್ಳುವುದರಿಂದ ಯಾರೂ ಹಿಂದುವಾಗುವುದಿಲ್ಲ. ಕೆಲವರು ಕುಂಕುಮ, ಕೆಲವರು ವಿಭೂತಿ, ಕೆಲವರು ಅಡ್ಡ ನಾಮ, ಕೆಲವರು ಉದ್ದ ನಾಮ, ಕೆಲವರು ಗಂಧ ಹಾಕಿಕೊಳ್ಳುತ್ತಾರೆ. ಇನ್ನೂ ಕೆಲವರು ಹಾಕಿಕೊಳ್ಳದೆಯೂ ಇರುತ್ತಾರೆ. ಅದು ಅವರವರ ವ್ಯಕ್ತಿಗತ ಆಯ್ಕೆ ಎಂದು ಪ್ರತಿಪಾದಿಸಿದೆ.

ನೀವು ಬೇಕಿದ್ದರೆ ಕುಂಕುಮವಷ್ಟೇ ಅಲ್ಲ, ಕೈಬಳೆ, ಕಿವಿಯೋಲೆ, ಮೂಗುಬೊಟ್ಟು, ಡಾಬು, ವಂಕಿ, ಬೈತಲೆ ಬೊಟ್ಟು ಯಾವುದನ್ನು ಬೇಕಿದ್ದರೂ ಹಾಕಿಕೊಳ್ಳಿ. ಅದು ನಿಮ್ಮ ಸ್ವಾತಂತ್ರ್ಯ ಎಂದು ಕಾಂಗ್ರೆಸ್‌ ಸಿಟಿ ರವಿಗೆ ಚಾಟಿ ಬೀಸಿದೆ.

Join Whatsapp