ನಾವು ಕೊಲೆಗಡುಕರೊಂದಿಗೆ ನಿಲ್ಲಲ್ಲ: ಹೈದರಾಬಾದ್ ದಲಿತ ಹತ್ಯೆಯ ಬಗ್ಗೆ ಅಸಾದುದ್ದೀನ್ ಓವೈಸಿ

Prasthutha|

ಹೈದರಾಬಾದ್: ತೆಲಂಗಾಣದ ಸರೂರ್ನಗರದಲ್ಲಿ ನಡೆದ ಅಮಾನವೀಯ ಹತ್ಯೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಂಡಿಸಿ ಇದು ಸಂವಿಧಾನ ಮತ್ತು ಇಸ್ಲಾಂ ಪ್ರಕಾರ ಕ್ರಿಮಿನಲ್ ಕೃತ್ಯ ಎಂದು ಬಣ್ಣಿಸಿದ್ದಾರೆ.

- Advertisement -

ತೆಲಂಗಾಣದ ಹೈದರಾಬಾದ್ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, “ಸರೂರ್ನಗರದಲ್ಲಿ ನಡೆದ ಘಟನೆಯನ್ನು ನಾವು ಖಂಡಿಸುತ್ತೇವೆ. ಆ ಹೆಂಗಸು ಸ್ವಇಚ್ಛೆಯಿಂದ ಮದುವೆಯಾಗಲು ನಿರ್ಧರಿಸಿದಳು. ಅವಳ ಗಂಡನನ್ನು ಕೊಲ್ಲಲು ಅವಳ ಸಹೋದರನಿಗೆ ಯಾವುದೇ ಹಕ್ಕಿಲ್ಲ. ಇದು ಸಂವಿಧಾನದ ಪ್ರಕಾರ ಅಪರಾಧ ಕೃತ್ಯ ಮತ್ತು ಇಸ್ಲಾಂ ಧರ್ಮದ ಪ್ರಕಾರ ಅತ್ಯಂತ ಕೆಟ್ಟ ಅಪರಾಧವಾಗಿದೆ. ಎಂದು ಹೇಳಿದ್ದಾರೆ.

ನಿನ್ನೆಯಿಂದ ಈ ಘಟನೆಗೆ ಮತ್ತೊಂದು ಬಣ್ಣ ಬಳಿಯಲಾಗುತ್ತಿದೆ. ಇಲ್ಲಿನ ಪೊಲೀಸರು ತಕ್ಷಣವೇ ಆರೋಪಿಗಳನ್ನು ಬಂಧಿಸಲಿಲ್ಲವೇ? ಅವರು ಅವನನ್ನು ಬಂಧಿಸಿದ್ದಾರೆ. ನಾವು ಕೊಲೆಗಡುಕರೊಂದಿಗೆ ನಿಲ್ಲುವುದಿಲ್ಲ ಎಂದು ಅವರು ಹೇಳಿದ್ದಾರೆ .

- Advertisement -

ಬಿಲ್ಲಿಪುರಂ ನಾಗರಾಜು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಹೈದರಾಬಾದ್ನ ಸರೂರ್ನಗರ ಪೊಲೀಸರು ಅಶ್ರಿನ್ ಸುಲ್ತಾನಾ ಅಲಿಯಾಸ್ ಪಲ್ಲವಿ ಅವರ ಇಬ್ಬರು ಸಂಬಂಧಿಕರನ್ನು ಗುರುವಾರ ಬಂಧಿಸಿದ್ದು ಸಹೋದರಿಯನ್ನು ವಿವಾಹವಾಗಿದ್ದ ಕಾರಣಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ

Join Whatsapp