ಆರಗ ಜ್ಞಾನೇಂದ್ರ ಬಣ್ಣದ ಮಾತಿಗೆ ತಕ್ಕ ಪಾಠ ಕಲಿಸ್ತೀವಿ: ಸಚಿವ ಪ್ರಿಯಾಂಕ್ ಖರ್ಗೆ

Prasthutha|

ಕಲಬುರಗಿ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆರಗ ಜ್ಞಾನೇಂದ್ರ ಬಣ್ಣದ ಮಾತಿಗೆ ತಕ್ಕ ಪಾಠ ಕಲಿಸ್ತೀವಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

- Advertisement -

ಆರಗ ಜ್ಞಾನೇಂದ್ರ ಬಣ್ಣದ ಮಾತು ಕೇವಲ ಖರ್ಗೆ ಅವರಿಗೆ ಮಾಡಿರೋ ಅವಮಾನ ಅಲ್ಲಾ. ಕಲ್ಯಾಣ ಕರ್ನಾಟಕದವರ ಬಗ್ಗೆ ಅವರಿಗೆ ಅಸಹನೆ, ಅವಹೇಳನೆ ಇದೆ. ಅವರದ್ದು ಮನಸ್ಮೃತಿ ಮನಸ್ಥಿತಿ. ಅದು ಕೇಶವ ಕೃಪಾದ ಆರ್ ಎಸ್ ಎಸ್ ಮನಸ್ಥಿತಿ ಎಂದರು.

ಮಲೆನಾಡಿನ ಕಡೆಯವರು ಪ್ರಬುದ್ಧರು ಅಂತ ಅಂದುಕೊಂಡಿದ್ದೇವೆ. ಹೀಗಾಗಿ ನಮ್ಮ ಮಕ್ಕಳನ್ನು ಆ ಕಡೆ ಓದಲು ಕಳಿಸುತ್ತೇವೆ. ಅವರ ಹೇಳಿಕೆ ನೋಡಿದ್ರೆ ನಮ್ಮ ಭಾಗದಲ್ಲಿಯೇ ನಮ್ಮ ಮಕ್ಕಳು ಓದಲಿ ಅನ್ನಿಸುತ್ತಿದೆ. ನಮ್ಮ ಭಾಗದವರು ದೊಡ್ಡ ಹುದ್ದೆ, ಸ್ಥಾನಕ್ಕೆ ಹೋಗಿದ್ದು ಅವರಿಗೆ ಸಹಿಸಲಾಗುತ್ತಿಲ್ಲ, ತಡೆದುಕೊಳ್ಳಲಾಗುತ್ತಿಲ್ಲಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.



Join Whatsapp