ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರಿಗೆ ಮೂರು ಟಿಕೆಟ್ ಕೇಳಿದ್ದೇವೆ: ಝಮೀರ್ ಅಹಮದ್

Prasthutha|

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ 3 ಸ್ಥಾನ ಮುಸ್ಲಿಮರಿಗೆ ಕೊಡಬೇಕು ಅಂತ ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ ಎಂದು ಸಚಿವ ಝಮೀರ್ ಅಹಮದ್ ಖಾನ್ ತಿಳಿಸಿದರು.

- Advertisement -


ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಮುಸ್ಲಿಮರಿಗೆ 3 ಸ್ಥಾನ ಕೇಳಿದ್ದೇವೆ. ಬೆಂಗಳೂರು ಕೇಂದ್ರ, ಬೀದರ್, ಹಾವೇರಿ ಕ್ಷೇತ್ರಗಳಿಗೆ ಟಿಕೆಟ್ ಕೇಳಿದ್ದೇವೆ. ಹೈಕಮಾಂಡ್ ತೀರ್ಮಾನ ಮಾಡಬೇಕು. ನಮಗೆ ಟಿಕೆಟ್ ಕೇಳಿದ್ದೇವೆ ಅನ್ನೋದಕ್ಕಿಂತ ಗೆಲ್ಲಬೇಕು ಅನ್ನೋದು ಮುಖ್ಯ ಎಂದರು.


ಈಗ ನಮ್ಮಲ್ಲಿ ಒಬ್ಬರು ಸಂಸದರು ಮಾತ್ರ ಇದ್ದಾರೆ. ಅವರಿಗೆ ಧ್ವನಿ ಎತ್ತಲು ಅವಕಾಶ ಕೊಡ್ತಿಲ್ಲ. ಬಿಜೆಪಿಯ 25, ಸುಮಲಾ ಹಾಗೂ ಪ್ರಜ್ವಲ್ ರೇವಣ್ಣ ಅವರೂ ಎನ್ ಡಿಎ ಭಾಗವಾಗಿರೋದ್ರಿಂದ ಅವರೂ ಬಿಜೆಪಿ ಜೊತೆಗಿದ್ದಾರೆ. ಒಟ್ಟು 27 ಜನ ಸಂಸದರು ಇದ್ದಾರೆ. 27 ಜನ ಸಂಸದರು ಕರ್ನಾಟಕ ವಿಚಾರವಾಗಿ ಧ್ವನಿ ಎತ್ತುತ್ತಿದ್ದಾರಾ? ನಮ್ಮ ಪಕ್ಷದವರು ಸಂಸತ್ ನಲ್ಲಿದ್ದರೆ ಧ್ವನಿ ಎತ್ತಲು ಅನುಕೂಲವಾಗುತ್ತದೆ ಎಂದರು.



Join Whatsapp