ಕಾವಲುಗಾರನ ಕೈಕಾಲು ಕಟ್ಟಿ ಸಹಕಾರಿ ಬ್ಯಾಂಕ್ ದರೋಡೆ

Prasthutha|

ಕಾರವಾರ: ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅಪಾರ ಮೌಲ್ಯದ ಚಿನ್ನಾಭರಣವನ್ನು ದರೋಡೆಕೋರರು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದಿದೆ.

- Advertisement -


ಮಳಗಿ ಗ್ರಾಮದ ಸಹಕಾರ ಸಂಘಕ್ಕೆ ನಿನ್ನೆ ರಾತ್ರಿ 10 ಗಂಟೆಯಲ್ಲಿ ನುಗ್ಗಿದ, 6 ಮಂದಿ ಮುಸುಕುಧಾರಿ ದರೋಡೆಕೋರರು ಚಿನ್ನಾಭರಣ ಕಳವು ಮಾಡಿದ್ದಾರೆ. ಕಾವಲುಗಾರ ಮಾದೇವಪ್ಪ ತಳವಾರ ಕೈ ಕಾಲು ಕಟ್ಟಿ ದರೋಡೆಕೋರರು ಚಿನ್ನಾಭರಣ ದೋಚಿದ್ದಾರೆ. ಸಹಕಾರ ಸಂಘದಲ್ಲಿದ್ದ ಕಬ್ಬಿಣದ ಕಪಾಟುಗಳನ್ನು ಮುರಿದು, ಗ್ಯಾಸ್ ಕಟರ್ ಬಳಸಿ ಕಬ್ಬಿಣದ ಬಾಗಿಲು ಮುರಿದು ಚಿನ್ನಾಭರಣ ಲೂಟಿ ಮಾಡಲಾಗಿದೆ.


ಇಂದು ಮುಂಜಾನೆ 4 ಗಂಟೆಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮುಂಡಗೋಡು ಪೊಲೀಸರು ಭೇಟಿ, ಪರಿಶೀಲನೆ ಮಾಡಿದರು. ಸಹಕಾರ ಸಂಘದಲ್ಲಿ ಸಾರ್ವಜನಿಕರು ಚಿನ್ನಾಭರಣ ಅಡವಿಟ್ಟಿದ್ದು, ಸಹಕಾರ ಸಂಘದ ಬಳಿ ರೈತರು, ಸಾರ್ವಜನಿಕರು ಜಮಾಯಿಸಿದ್ದಾರೆ. ಈ ಹಿಂದೆಯೂ ಸಹಕಾರ ಸಂಘದಲ್ಲಿ ಕಳ್ಳತನದ ಯತ್ನ ನಡೆದಿತ್ತು ಎನ್ನಲಾಗುತ್ತಿದೆ

Join Whatsapp