ವಿಟ್ಲ: ತಮ್ಮನಿಂದ ಅಣ್ಣನ ಕೊಲೆ

Prasthutha|

ವಿಟ್ಲ: ಜಾಗದ ವಿಚಾರವಾಗಿ ನಡೆದ ಜಗಳದಲ್ಲಿ ಕಿರಿಯ ಸಹೋದರ ಅಣ್ಣನನ್ನು ಕೊಂದ ಘಟನೆ ವಿಟ್ಲದ ಮಂಗಿಲಪದವು ಬನಾರಿ ಎಂಬಲ್ಲಿ ನಡೆದಿದೆ.

- Advertisement -


ಬನಾರಿ ಕೊಡಂಗೆ ನಿವಾಸಿ ಗಣೇಶ್ (53) ಸಾವನ್ನಪ್ಪಿದ್ದು , ಜಾಗದ ವಿಚಾರವಾಗಿ ಹಲವು ಸಮಯದಿಂದ ನಡೆಯುತ್ತಿದ್ದ ಸಹೋದರರ ನಡುವಿನ ಗಲಾಟೆ ಕೊಲೆಯ ಮೂಲಕ ಅಂತ್ಯ ಕಂಡಿದೆ.


ಪದ್ಮನಾಭ (49) ಆರೋಪಿ. ಕುಡಿದು ಬಂದು ಸಹೋದರಿಬ್ಬರು ಜಾಗದ ವಿಚಾರವಾಗಿ ಮನೆಯಲ್ಲಿ ಆಗಾಗ ಗಲಾಟೆ ನಡೆಸುತ್ತಿದ್ದರು. ಒಂದು ತಿಂಗಳ ಹಿಂದೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಿನ್ನೆ ರಾತ್ರಿಯೂ ಗಲಾಟೆ ನಡೆದಿದೆ ಎನ್ನ ಲಾಗಿದೆ.

- Advertisement -


ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp