ಮುಖ್ಯಮಂತ್ರಿಯಿಂದ ಅನೈತಿಕ ಗೂಂಡಾಗಿರಿಯ ಸಮರ್ಥನೆಯ ಬೆನ್ನಿಗೆ ಮಂಗಳೂರಿನಲ್ಲಿ ಶಸ್ತ್ರಾಸ್ತ್ರ ಹಂಚಿದ ವಿಶ್ವ ಹಿಂದೂ ಪರಿಷತ್!

Prasthutha|

ಮಂಗಳೂರು: ನಿನ್ನೆಯಷ್ಟೇ “ಕ್ರಿಯೆಗೆ ಪ್ರತಿಕ್ರಿಯೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಘಪರಿವಾರದ ಅನೈತಿಕ ಗೂಂಡಾಗಿರಿಯನ್ನು ಸಮರ್ಥಿಸಿದ್ದ ಬೆನ್ನಿಗೆ ಆಯುಧ ಪೂಜೆ ನೆಪದಲ್ಲಿ ಕಾರ್ಯಕರ್ತರ ಕೈಗೆ ವಿಹಿಂಪ ನಾಯಕರು ತ್ರಿಶೂಲ ನೀಡಿದ್ದಾರೆ.

- Advertisement -

ಮಂಗಳೂರಿನ‌ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್ ಕಚೇರಿ ‘ವಿಶ್ವ ಶ್ರೀ’ಯಲ್ಲಿ ನಡೆದ ಕಾರ್ಯಕ್ರಮ‌ದಲ್ಲಿ ಆಯುಧ ಪೂಜೆ ಹಿನ್ನೆಲೆಯಲ್ಲಿ ಶಸ್ತ್ರ ಪೂಜೆ ಮತ್ತು ತ್ರಿಶೂಲ ದೀಕ್ಷೆಯ ನೆಪದಲ್ಲಿ ನೂರಾರು ಕಾರ್ಯಕರ್ತರಿಗೆ ವಿಹಿಂಪ ನಾಯಕರು ತ್ರಿಶೂಲ ನೀಡಿದ್ದಾರೆ. ಬಜರಂಗದಳ ನಾಯಕ ರಘು ಸಕಲೇಶಪುರ, ವಿಹಿಂಪ ನಾಯಕ ಶರಣ್ ಪಂಪ್ವೆಲ್ ಕಾರ್ಯಕರ್ತರಿಗೆ ತ್ರಿಶೂಲ ವಿತರಣೆ ಮಾಡಿದ್ದಾರೆ.

ಈ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದ್ದು, ಪೂಜೆಯ ನೆಪದಲ್ಲಿ ಬಹಿರಂಗವಾಗಿ ಆಯುಧಗಳನ್ನು ವಿತರಿಸುತ್ತಿದ್ದರೂ ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Join Whatsapp