‘ಬಿಗ್ ಬಾಸ್’ ಮನೆಯಲ್ಲಿ ರಾಜಕಾರಣದ ಕಿಡಿ ಹೊತ್ತಿಸುತ್ತೇನೆ: ಮಾಜಿ ಸಚಿವ ಎಚ್ ವಿಶ್ವನಾಥ್

Prasthutha|

- Advertisement -

ಸುಪ್ರೀಂ ಕೋರ್ಟಿನಿಂದ ಅನರ್ಹಗೊಂಡ ಹಾಲಿ ವಿಧಾನ ಪರಿಷತ್ ನಾಮ ನಿರ್ದೇಶಿತ ಸದಸ್ಯ ಎಚ್ ವಿಶ್ವನಾಥ್ ಬಿಗ್ ಬಾಸಿಗೆ ತೆರಳುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನದ ಅವಕಾಶವನ್ನು ಕಳೆದುಕೊಂಡಿರುವ ವಿಶ್ವನಾಥ್ ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಬಿಜೆಪಿ ನಾಯಕರ ಬೆನ್ನುಬಿದ್ದಿದ್ದಾರೆ. ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತಾಡಿದ ವಿಶ್ವನಾಥ್ “ನಾನು ಬಿಗ್ ಬಾಸ್ ಮನೆಗೆ ಹೋಗಲು ಆಸೆಪಟ್ಟಿದ್ದೇನೆ. ನನ್ನ ಸ್ನೇಹಿತರೂ ನನ್ನನ್ನು ಒತ್ತಾಯಿಸುತ್ತಿದ್ದಾರೆ. ನನಗೆ ಈ ಹಿಂದಿನ ಸೀಸನಿಗೂ ಆಹ್ವಾನ ಬಂದಿತ್ತು. ಆದರೆ ಅನಾರೋಗ್ಯ ದೃಷ್ಟಿಯಿಂದ ಹೋಗಲು ಸಾಧ್ಯವಾಗಿಲ್ಲ .ಈ ಬಾರಿ ಬಿಗ್ ಬಾಸ್ ಮನೆಗೆ ತೆರಳಿ ಅಲ್ಲಿ ರಾಜಕಾರಣದ ಕಿಡಿ ಹೊತ್ತಿಸುತ್ತೇನೆ “ ಎಂದು ಹೇಳಿದರು.

- Advertisement -

ರಾಜಕೀಯದಲ್ಲಿ ನಂದಿಹೋದ ಕಿಡಿಯನ್ನು ಬಿಗ್ ಬಾಸ್ ಮನೆಯಲ್ಲಿ ಹೊತ್ತಿಸಲು ಹೊರಟ ವಿಶ್ವನಾಥ್ ಅವರ ಹೇಳಿಕೆ ಸಾಮಾಜಿಕ ವಲಯದಲ್ಲಿ ಈಗ ನಗೆಪಾಟಲಿಗೀಡಾಗಿದೆ. ವಿಶ್ವನಾಥ್ ಅವರ ಹೇಳಿಕೆಯ ನಂತರ ‘ಬಿಗ್ ಬಾಸ್’ ತಂಡ ಅವರನ್ನು ಮನೆಗೆ ಆಹ್ವಾನಿಸುತ್ತದೋ ಎಂದು ಕಾದು ನೋಡಬೇಕಾಗಿದೆ.

Join Whatsapp