ಮನೆ ಛಾವಣಿಯಿಂದ ಜಿಗಿದ ಯುವಕನನ್ನು ಕಳ್ಳನೆಂದು ಶಂಕಿಸಿ ಹತ್ಯೆಗೈದ ಗ್ರಾಮಸ್ಥರು!

Prasthutha|

ಹೊಸದಿಲ್ಲಿ: ಮನೆಯೊಂದರ ಛಾವಣಿಯಿಂದ ಜಿಗಿದ ಯುವಕನನ್ನು ಕಳ್ಳನೆಂದು ಶಂಕಿಸಿದ ಗ್ರಾಮಸ್ಥರು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದ ದಾರುಣ ಘಟನೆಯು ದೆಹಲಿಯ ಸುಲೇಮಾನ್​ ನಗರದಲ್ಲಿ ನಡೆದಿದೆ.

- Advertisement -

ಗ್ರಾಮಸ್ಥರಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ನಂತರ ಆತ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ದೆಹಲಿಯ ಸುಲೇಮಾನ್ ನಗರದ ಮನೆಯೊಂದರ ಛಾವಣಿಯಿಂದ ಜಿಗಿದ ಯುವಕನನ್ನು ಗ್ರಾಮಸ್ಥರು ಕಳ್ಳ ಎಂದು ಶಂಕಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಡಿಸಿಪಿ ಪರಮಿಂದರ್​ ಸಿಂಗ್, ಮನೆಯ ಛಾವಣಿಯಿಂದ ಜಿಗಿದ ಯುವಕನನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ. ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆತ ಬದುಕುಳಿಯಲಿಲ್ಲ ಎಂದು ಹೇಳಿದ್ದಾರೆ.

Join Whatsapp