ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಇಂದು ಅಸ್ತಿತ್ವಕ್ಕೆ

Prasthutha|

ಬಳ್ಳಾರಿ: ರಾಜ್ಯದ 31 ಜಿಲ್ಲೆಯಾಗಿ ಇಂದು ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬರಲಿದೆ. ಇದೇ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಉತ್ಸವವನ್ನು ಇಂದು ಮತ್ತು ನಾಳೆ ಎರೆಡು ದಿನಗಳ‌ ಕಾಲ‌ ಜಿಲ್ಲಾ ಕೇಂದ್ರ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಸಂಜೆ 6.30 ಕ್ಕೆ ಜಿಲ್ಲೆಯ ಮತ್ತು ಜಿಲ್ಲಾ ಉತ್ಸವದ ಉದ್ಘಾಟನೆ ಮಾಡಲಿದ್ದಾರೆ.

- Advertisement -

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದು ವಿವಿಧ ಮಠಾಧೀಶರು, ಸಚಿವರುಗಳು ಪಾಲ್ಗೊಳ್ಳಲಿದ್ದಾರೆ. ಉತ್ಸವದ ಅಂಗವಾಗಿ ಜನಪದ ಕಲಾ ತಂಡಗಳು ಸೇರಿದಂತೆ 80 ಕ್ಕೂ ಹೆಚ್ಚು ಕಲಾ ತಂಡಗಳಿಂದ ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವನ್ನು ಎರೆಡು ದಿನಗಳ ಕಾಲ ನೀಡಲಿದ್ದಾರೆ.

ಇದಕ್ಕಾಗಿ ಐತಿಹಾಸಿಕ ಹಂಪಿಯ ವಿರೂಪಾಕ್ಷ ಗೋಪುರ ಸೇರಿದಂತೆ ವಿವಿಧ ಶಿಲ್ಪ‌ಕಲಾ ಸ್ಮಾರಕಗಳ ಪ್ರತಿ ರೂಪದೊಂದಿಗೆ ಬೃಹತ್ ವೇದಿಕೆ ರಚಿಸಿದೆ. ಕೋವಿಡ್ ನಿಯಮಗಳನ್ನು ಪಾಲಿಸುವ ಕಾರಣ ಕಡಿಮೆ ಜನರಿಗೆ ಪ್ರದರ್ಶನ‌ ವೀಕ್ಷಣೆಗೆ ಅವಕಾಶ ಮಾಡಿದೆ. ಉಳಿದಂತೆ ಸಾಮಾಜಿಕ ಜಾಲತಾಣ ಮತ್ತು ಎಲ್ ಈಡಿ ಪರದೆಗಳ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.

- Advertisement -

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ನಾಳೆ ಸಂಜೆ ಸಮಾರೋಪ ಭಾಷಣ ಮಾಡಲಿದ್ದಾರೆ.

Join Whatsapp