ಗುಜರಾತ್ ಹತ್ಯಾಕಾಂಡ ಪುನರಾವರ್ತಿಸುವುದಾಗಿ ಬಹಿರಂಗ ಬೆದರಿಕೆ ಹಾಕಿದ ವಿಎಚ್ ಪಿ

Prasthutha|

ಮನೇಸರ್ (ಹರಿಯಾಣ): ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಹತ್ಯೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್, ಮುಸ್ಲಿಮರನ್ನು ಬಹಿಷ್ಕರಿಸುವಂತೆ ಮತ್ತು ಅಗತ್ಯವಿದ್ದರೆ ಅವರ ವಿರುದ್ಧ ಆಯುಧಗಳನ್ನು ಎತ್ತುವಂತೆ ಕರೆನೀಡಿದೆ.

- Advertisement -

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಅವರನ್ನು ಭೀಕರವಾಗಿ ಹತ್ಯೆ ಮಾಡಿರುವುದನ್ನು ಪ್ರತಿಭಟಿಸಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಸಂಘಟನೆಗಳ ಸದಸ್ಯರು ಸೇರಿದಂತೆ 300 ಕ್ಕೂ ಹೆಚ್ಚು ಹಿಂದುತ್ವ ಕಾರ್ಯಕರ್ತರು ‘ಮಹಾಪಂಚಾಯತ್’ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು ಬಹಿಷ್ಕರಿಸುವಂತೆ ಮತ್ತು ಅಗತ್ಯವಿದ್ದರೆ ಅವರ ವಿರುದ್ಧ ಆಯುಧಗಳನ್ನು ಎತ್ತಿಕೊಳ್ಳುವ ಕರೆಗಳು ಕೇಳಿಬಂದಿವೆ.

ಇದಕ್ಕೂ ಮೊದಲು ಟ್ವಿಟರ್ ನಲ್ಲಿ ‘ಮುಸ್ಲಿಮರನ್ನು ಬಹಿಷ್ಕರಿಸಿ’ #TotalBoycott ವೈರಲ್ ಆಗಿತ್ತು. ಈ ಕರೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಮತ್ತು ಬಿ ಯ ಬಹಿರಂಗ ಉಲ್ಲಂಘನೆಯಾಗಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಹ್ಯಾಶ್ ಟ್ಯಾಗ್ ಅನ್ನು ನಿರ್ಭೀತಿಯಿಂದ ಟ್ರೆಂಡ್ ಮಾಡಲು ಮೋದಿ ಸರ್ಕಾರವು ಅವರಿಗೆ ನೈತಿಕ ಬೆಂಬಲವನ್ನು ನೀಡುತ್ತಿದೆ ಎಂದು ಆರೋಪಿಸಲಾಗಿದೆ.

Join Whatsapp