RSS ಕಾರ್ಯಕರ್ತನಿಗೆ ಚೂರಿ ಇರಿದ VHP ಮುಖಂಡ!

Prasthutha|

ಆಲಪ್ಪುಝ: ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಚಾಕುವಿನಿಂದ ಇರಿದ ಪರಿಣಾಮ RSS ಕಾರ್ಯಕರ್ತ ಗಂಭೀರವಾಗಿ ಗಾಯಗೊಂಡ ಘಟನೆ ನೆರೆಯ ಕೇರಳದಲ್ಲಿ ವರದಿಯಾಗಿದೆ.

- Advertisement -

LLB ವ್ಯಾಸಂಗ ಮುಗಿಸಿ ಚೆಂಗನ್ನೂರು ವಕೀಲರ ಕಚೇರಿಯಲ್ಲಿ ತರಬೇತಿ ಪಡೆಯುತ್ತಿದ್ದ RSS ಕಾರ್ಯಕರ್ತನಾದ ರಾಹುಲ್ ಕುಮಾರ್ (28) ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡ ಯುವಕ.

ಪ್ರಕರಣದ ಆರೋಪಿ ಚೆಂಗನ್ನೂರು ಬಾರ್‌ ಅಸೋಸಿಯೇಷನ್‌ನ ವಕೀಲರಾದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಅಶೋಕ್ ಅಮ್ಮಾಂಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ರಾತ್ರಿ ಹೋಟೆಲ್‌ನಲ್ಲಿ ಊಟ ಮುಗಿಸಿ ಸಮೀಪದ ಅಂಗಡಿಯಲ್ಲಿ ದಿನಸಿ ಖರೀದಿಸುತ್ತಿದ್ದಾಗ ರಾಹುಲ್ ಮೇಲೆ ಚಾಕುವಿನಿಂದ ದಾಳಿ ಮಾಡಲಾಗಿದೆ.

ಮಹಿಳಾ ವಕೀಲರೊಂದಿಗೆ ಆರೋಪಿ ಅಶೋಕ್ ಅಗೌರವದ ವರ್ತನೆ ತೋರಿರುವುದನ್ನು ರಾಹುಲ್ ಪ್ರಶ್ನಿಸಿದ್ದು ಆರೋಪಿಯ ದ್ವೇಷಕ್ಕೆ ಕಾರಣವಾಯಿತು ಎನ್ನಲಾಗಿದೆ.

ರಾಹುಲ್ ಅವರ ಎದೆಯ ಬಲ ಭಾಗ ಮತ್ತು ಹೊಟ್ಟೆಯ ಎಡಭಾಗದಲ್ಲಿ ಗಂಭೀರವಾಗಿ ಇರಿತವಾಗಿದ್ದು, ಅವರನ್ನು ಚೆಂಗನ್ನೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ನಂತರ ಕಲ್ಲಿಶ್ಶೇರಿ ಕೆಎಂ ಚೆರಿಯಾನ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.

ರಾಹುಲ್‌ನ ಕರುಳಿಗೆ ಗಂಭೀರವಾದ ಗಾಯವಾಗಿದ್ದು, ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.

Join Whatsapp