‘ರೈತರನ್ನು ಕೊಂದು ಅಲ್ಲಗಳೆಯಲು ಸಾಧ್ಯವಿಲ್ಲ’: ಬಿಜೆಪಿ ಸಂಸದನ ಟ್ವೀಟ್!

Prasthutha|

ಹೊಸದಿಲ್ಲಿ: ಲಖಿಂಪುರ ರೈತರ ಹತ್ಯಾಕಾಂಡದಲ್ಲಿ ಬಿಜೆಪಿ ಸಂಸದ ವರುಣ್ ಗಾಂಧಿ ಮತ್ತೊಮ್ಮೆ ಉತ್ತರಪ್ರದೇಶ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೈತರ ಕೊಲೆಗೆ ಕಾರಣರಾದವರು ಅದರ ಹೊಣೆ ಹೊತ್ತು ನ್ಯಾಯ ದೊರಕಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.

- Advertisement -

‘ವೀಡಿಯೋ ತುಂಬಾ ಸ್ಪಷ್ಟವಾಗಿದೆ. ಹತ್ಯೆಗೈಯ್ಯುವ ಮೂಲಕ ಪ್ರತಿಭಟನಾಕಾರರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಕ್ರೌರ್ಯ ಮತ್ತು ಅಹಂಕಾರದ ಈ ದೃಶ್ಯಗಳು ಪ್ರತಿಯೊಬ್ಬ ರೈತನ ಮನಸ್ಸಿಗೆ ಹರಡುವ ಮೊದಲು ಮುಗ್ಧ ರೈತರ ರಕ್ತ ಚೆಲ್ಲಿದವರು ಅದರ ಹೊಣೆ ಹೊತ್ತು ನ್ಯಾಯ ದೊರಕಿಸಿಕೊಡಬೇಕು.” ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಲಖಿಂಪುರದಲ್ಲಿ ರೈತರ ಮೇಲೆ ಕೇಂದ್ರ ಸಚಿವರ ವಾಹನ ಚಲಾಯಿಸುವ ದೃಶ್ಯಾವಳಿಗಳನ್ನು ಅವರು ಹಂಚಿಕೊಂಡಿದ್ದಾರೆ.

ಇದಕ್ಕೂ ಮುನ್ನ ವರುಣ್ ಗಾಂಧಿ ಅಪರಾಧಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದರು. ವರುಣ್ ಗಾಂಧಿ ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ.

Join Whatsapp