ರಾಷ್ಟ್ರಧ್ವಜಕ್ಕಾಗಿ ಬಡವರಿಂದ ಹಣ ವಸೂಲಿ: ವರುಣ್ ಗಾಂಧಿ ಆಕ್ಷೇಪ

Prasthutha|

ನವದೆಹಲಿ:  ನ್ಯಾಯಬೆಲೆ ಅಂಗಡಿಯಲ್ಲಿ ಒತ್ತಾಯಪೂರ್ವಕವಾಗಿ ತ್ರಿವರ್ಣ ಧ್ವಜ ಮಾರಾಟ ಮಾಡುತ್ತಿರುವುದು, ಬಡ ಜನರಿಂದ ಹಣ ವಸೂಲಿಗಿಳಿಯುವುದೆಲ್ಲ ದೇಶಭಿಮಾನವಲ್ಲ, ನಾಚಿಕೆಗೇಡು ಎಂದು ಬಿಜೆಪಿಯ ಸಂಸದ ವರುಣ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ನ್ಯಾಯಬೆಲೆ ಅಂಗಡಿ ಮುಂದೆ ಬಡವರ ಅಸಹಾಯಕ ಹೇಳಿಕೆಗಳ ಮಾಧ್ಯಮ ವರದಿಯನ್ನು ಟ್ವೀಟರ್ ನಲ್ಲಿ  ಹಾಕಿದ ಅವರು, 75ನೇ ವರ್ಷದ ಸ್ವಾತಂತ್ರ್ಯೋತ್ಸವ ಬಡವರಿಗೆ ಹೊರೆಯಾಗುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದ್ದಾರೆ.

ನ್ಯಾಯಬೆಲೆ ಅಂಗಡಿಯಲ್ಲಿ 20 ರೂ.ಗೆ ರಾಷ್ಟ್ರಧ್ವಜವನ್ನು ಮಾರಾಟ ಮಾಡಲಾಗುತ್ತಿದೆ. ಧ್ವಜ ಖರೀದಿ ಮಾಡದೇ ಇರುವವರಿಗೆ ಪಡಿತರ ನೀಡುವುದಿಲ್ಲ ಎಂದು ಅಂಗಡಿಯವನು ಹೇಳಿಕೆ ನೀಡಿದ್ದಾನೆ. ಇದುಆಹಾರ ಇಲಾಖೆಯ ಇನ್ಸ್ ಪೆಕ್ಟರ್ ಅವರು ನೀಡಿರುವ ಸೂಚನೆಯಾಗಿದೆ. ಆದರೆ, ನಮಗೆ ಕಷ್ಟ ಕಾಲದಲ್ಲಿ ಆಹಾರ ಖರೀದಿಸಲು ಹಣವಿರುವುದಿಲ್ಲ. ಇನ್ನು ಧ್ವಜಕ್ಕೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಹೊರೆಯಾಗಿದೆ ಎಂದು ಕೂಲಿಕಾರ್ಮಿಕರು ಹೇಳಿದ್ದಾರೆ.

- Advertisement -

ಇದನ್ನು ಟ್ವಿಟ್ಟರ್ ನಲ್ಲಿ ಹಾಕಿರುವ ವರುಣ್ ಗಾಂಧಿ,  ರಾಷ್ಟ್ರಧ್ವಜಕ್ಕಾಗಿ ಹಣ ವಸೂಲಿ ಮಾಡುವುದು ನಾಚಿಕೆಗೇಡು. ಜೀವನ ನಿರ್ವಹಣೆ ಮಾಡಲು ಕಷ್ಟಪಡುತ್ತಿರುವ ಬಡವರ ಬಳಿ ಆಹಾರ ಖರೀದಿಸಲೇ ಹಣವಿರಲ್ಲ. ಅವರ ಬಳಿ 20 ರೂ. ಹೆಚ್ಚುವರಿ ಬಲವಂತದ ವಸೂಲಿ ಸರಿಯಲ್ಲ ಎಂದಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ , ಆ.13ರಿಂದ 15ರ ನಡುವೆ ಪ್ರತಿಯೊಂದು ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಅಭಿಯಾನಕ್ಕಾಗಿ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ಅದೇ ಪಕ್ಷದ ಸಂಸದ ವರುಣ್ ಗಾಂಧಿ ಇದನ್ನು ಟೀಕಿಸಿದ್ದಾರೆ.

Join Whatsapp