ಉತ್ತರ ಪ್ರದೇಶ: CAA, NRC ವಿರುದ್ಧದ ಪ್ರತಿಭಟನಾಕಾರರಿಗೆ ನೋಟಿಸ್

Prasthutha|

- Advertisement -

ಉತ್ತರ ಪ್ರದೇಶ: ಎರಡು ವರ್ಷದ ಹಿಂದೆ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆ ವೇಳೆ ಉಂಟಾದ ಹಾನಿಗಾಗಿ ₹ 57 ಲಕ್ಷ ‍ಪರಿಹಾರ ನೀಡುವಂತೆ ಇಲ್ಲಿನ ನಹ್ತೌರ್‌ನಲ್ಲಿ ಪೊಲೀಸರು 60 ಜನರಿಗೆ ನೋಟಿಸ್ ನೀಡಿದ್ದಾರೆ.

2019ರ ಡಿ.20 ರಂದು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಉದ್ರಿಕ್ತ ಗುಂಪು ಸರ್ಕಾರಿ ಆಸ್ತಿ ಹಾನಿಗೊಳಿಸಿದೆ ಮತ್ತು ಪೊಲೀಸ್ ಜೀಪಿಗೆ ಬೆಂಕಿ ಹಚ್ಚಿದೆ ಎಂದು ನಹ್ತೌರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಪಂಕಜ್ ತೋಮರ್ ಹೇಳಿದ್ದಾರೆ.

- Advertisement -

ಪ್ರತಿಭಟನಾಕಾರರು ಪೊಲೀಸರ ಮೇಲೂ ಹಲ್ಲೆ ನಡೆಸಿದೆ ಎಂದು ಆರೋಪಿಸಿ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಅನಾಸ್ ಮತ್ತು ಸಲ್ಮಾನ್ ಎಂಬ ಇಬ್ಬರು ಯುವಕರು ಸಾವನ್ನಪ್ಪಿದ್ದರು ಎಂದು ತಿಳಿಸಿದ್ದಾರೆ.



Join Whatsapp