ಕೋವಿಡ್ ನಿಯಂತ್ರಣಕ್ಕಾಗಿ ಗೋಮೂತ್ರ ಸೇವಿಸಲು ಜನತೆಗೆ ಕರೆ ನೀಡಿದ ಉತ್ತರಪ್ರದೇಶ ಬಿಜೆಪಿ ಶಾಸಕ!

Prasthutha|

ಹೊಸದಿಲ್ಲಿ : ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ನಡುವೆ ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರೊಬ್ಬರು ಕೋವಿಡ್ ನಿಯಂತ್ರಣಕ್ಕಾಗಿ ‘ಗೌಮುತ್ರಾ’ (ಗೋಮೂತ್ರ) ಕುಡಿಯುವಂತೆ ಜನರಿಗೆ ಕರೆ ನೀಡಿದ್ದಾರೆ. ಬಲ್ಲಿಯಾ ಜಿಲ್ಲೆಯ ಬೈರಿಯಾ ದ ಶಾಸಕ ಸುರೇಂದ್ರ ಸಿಂಗ್ ಅವರು ಗೋಮೂತ್ರ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.

- Advertisement -

ಸುರೇಂದ್ರ ಸಿಂಗ್ ಸ್ವತಃ ಗೋಮೂತ್ರವನ್ನು ಸೇವಿಸುವ ಮೂಲಕ ಸೇವಿಸುವ ವಿಧಾನವನ್ನೂ ತಿಳಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಕಾಣಬಹುದು. ‘ಗೌಮುತ್ರಾ’ ಬಳಸಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಬಹುದು ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ.  ಎರಡರಿಂದ ಮೂರು ಕ್ಯಾಪ್ ಫುಲ್ ಗೋ ಮೂತ್ರವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಡಿಯಬೇಕು ಎಂದು ಹೇಳಿದ್ದಾರೆ.

ಗೋ ಮೂತ್ರ ಸೇವಿಸಿದ ನಂತರ ಅರ್ಧ ಗಂಟೆಗಳ ಕಾಲ ಏನನ್ನೂ ಸೇವಿಸಬೇಡಿ, ಗೋಮೂತ್ರವು ಅನೇಕ ರೋಗಗಳ ವಿರುದ್ಧ, ವಿಶೇಷವಾಗಿ ಹೃದ್ರೋಗಗಳ ವಿರುದ್ಧ ಸೂಪರ್ ಪವರ್ ಆಗಿದೆ ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ.

Join Whatsapp