ಉತ್ತರಪ್ರದೇಶ: ಮೇಲ್ಜಾತಿಯ ಗುಂಪಿನಿಂದ ದಲಿತ ಯುವಕನಿಗೆ ಮಾರಣಾಂತಿಕ ಹಲ್ಲೆ

Prasthutha|

ಲಕ್ನೋ: ಉತ್ತರ ಪ್ರದೇಶದ ಕಾನ್ಪುರ್ ದೇಹಾತ್ ಜಿಲ್ಲೆಯಲ್ಲಿ 20 ವರ್ಷದ ದಲಿತ ಯುವಕನನ್ನು ಮೇಲ್ಜಾತಿಯ ಗುಂಪೊಂದು ಅಮಾನುಷವಾಗಿ ಥಳಿಸಿದೆ. ಕ್ರೂರವಾಗಿ ಥಳಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ವೀಡಿಯೋ ವೀಕ್ಷಿಸಿ…

ಕಾನ್ಪುರ್ ದೇಹಾತ್‌ನ ಅಕ್ಬರ್‌ಪುರದಲ್ಲಿ ಈ ಘಟನೆ ನಡೆದಿದ್ದು, ತನ್ನ ಜಾತಿ ಯಾವುದೆಂದು ಹೇಳಲು ಒತ್ತಾಯಿಸಿ ಥಳಿಸುವುದು, ಒದೆಯುವುದು ಮತ್ತು ಯುವಕನ ಕೂದಲು ಹಿಡಿದು ಕೆಳಗೆ ಬೀಳಿಸುವುದನ್ನು ವೀಡಿಯೋದಲ್ಲಿ ಕಾಣಬಹುದು. ಚಿತ್ರಹಿಂಸೆ ನೀಡುವ ವೇಳೆ ಯುವಕನ ಪ್ಯಾಂಟ್ ಕಳಚಿ ಮರಕ್ಕೆ ಕಟ್ಟಿಹಾಕಿ ಖಾಸಗಿ ಸ್ಥಳಕ್ಕೆ ಕೋಲಿನಿಂದ ಹಲ್ಲೆ ಮಾಡುವ ದೃಶ್ಯವನ್ನೂ ವೀಡಿಯೋದಲ್ಲಿ ಕಾಣಬಹುದು. ಮಾರಣಾಂತಿಕ ಹಲ್ಲೆಗೊಳಗಾದ ಯುವಕನನ್ನು ಕಾನ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.  

Join Whatsapp