ಇಂದು ಮಂಗಳೂರಿನಲ್ಲಿ ‘ಉರ್ದು ಮೆಹಫಿಲೇ ಮುಷಾಯಿರ’ ಕಾರ್ಯಕ್ರಮ

Prasthutha|

ಮಂಗಳೂರು: ಇಂದು ಸಂಜೆ 6.30ಕ್ಕೆ ಮಂಗಳೂರಿನ ಪುರಭವನದಲ್ಲಿ ‘ಉರ್ದು ಮೆಹಫಿಲೇ ಮುಷಾಯಿರ’ (ಉರ್ದು ಭಾಷೆಯಲ್ಲಿ ಕಾವ್ಯ ಗೋಷ್ಠಿ ಕಾರ್ಯಕ್ರಮ) ನಡೆಯಲಿದೆ.

- Advertisement -


ಉರ್ದು ಭಾಷೆ, ಸಾಹಿತ್ಯ ಹಾಗು ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಿರುವ, ರಾಜ್ಯ ಹಾಗು ಹೊರರಾಜ್ಯಗಳ ಖ್ಯಾತ ಉರ್ದು ಕವಿಗಳು ಭಾಗವಹಿಸಲಿರುವ ಈ ವಿಶಿಷ್ಟ ಕಾರ್ಯಕ್ರಮ ದುಬೈನ ಪ್ರತಿಷ್ಠಿತ ಸಿ ಎಚ್ ಎಸ್ ಗ್ರೂಪ್ ನ ಸ್ಥಾಪಕ ಹಾಗು ಅಧ್ಯಕ್ಷ, ಖ್ಯಾತ ಎನ್ನಾರೈ ಉದ್ಯಮಿ ನಾಸಿರ್ ಸಯ್ಯದ್ ಅವರ ಪ್ರಾಯೋಜಕತ್ವದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಂಜುಮನ್ ತರಕ್ಕೀ ಉರ್ದು ಸಂಘಟನೆಯ ಅಧ್ಯಕ್ಷ ಅಬ್ದುಲ್ ಸಲಾಂ ಮದನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp