ಚುನಾವಣೆಗೆ ಸ್ಪರ್ಧಿಸದಂತೆ ಮುಖ್ಯಮಂತ್ರಿ ಆದಿತ್ಯನಾಥ್ ಗೆ ಸಲಹೆ ನೀಡಿದ ಅಖಿಲೇಶ್ ಯಾದವ್

Prasthutha|

ಲಕ್ನೋ: ಅದಿತ್ಯನಾಥ್ ಅವರೇ, ನೀವು ಮುಂದಿನ ಚುನಾವಣೆಯಲ್ಲಿ ಸೋಲಲಿರುವುದರಿಂದ ಸ್ಪರ್ಧಿಸದಿರುವುದು ಉತ್ತಮ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ, ಸಂಸದ ಅಖಿಲೇಶ್ ಯಾದವ್ ಸಲಹೆ ನೀಡಿದ್ದಾರೆ.

- Advertisement -

ಸರ್ಕಾರದ ವಿರುದ್ಧ ಶನಿವಾರ ಮತ್ತೆ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, “ ಯೋಗಿ ವೇಷದಲ್ಲಿರುವ ಆದಿತ್ಯನಾಥ್ ಅವರೇ ಮುಂದಿನ ಚುನಾವಣೆಯಲ್ಲಿ ತಾವೂ ಸ್ಪರ್ಧಿಸುವುದು ಬೇಡ, ಕಾರಣ ನೀವು ಸೋಲಲಿದ್ದೀರಿ. ನನ್ನ ಸ್ಪರ್ಧೆಯ ಬಗ್ಗೆ ನೀವು ತಲೆಕೆಡಿಸುವ ಅಗತ್ಯವಿಲ್ಲ. ನನ್ನ ಬಗ್ಗೆ ಪಕ್ಷ ನಿರ್ಧರಿಸುತ್ತದೆ” ಎಂದು ತಿರುಗೇಟು ನೀಡಿದ್ದಾರೆ.

ಜಾತಿ ಗಣತಿಯನ್ನು ಬೆಂಬಲಿಸಿ ಪ್ರತಿಕ್ರಿಯಿಸಿದ ಅಖಿಲೇಶ್ “ ಸ್ವಾತಂತ್ರ್ಯ ನಂತರದಲ್ಲಿ ಅರ್ಹವಾದ ಗೌರವವನ್ನು ಪಡೆಯಲು ಸಾಧ್ಯವಾಗದ ಜಾತಿಗಳ ಬಗ್ಗೆ ನಾವು ಪ್ರಸಕ್ತ ಈಗ ಹೆಚ್ಚು ತಿಳಿದುಕೊಳ್ಳಬಹುದು. ಈ ನಿಟ್ಟಿನಲ್ಲಿ ಜಾತಿ ಗಣತಿಗೆ ಮುಂದಾದ ನಡೆಯನ್ನು ಸ್ವಾಗತಿಸುತ್ತೇನೆ. ಹಿಂದುಳಿದ ಜಾತಿಗಳ ಜನರು ಉಳಿದ ಜನಸಂಖ್ಯೆಗೆ ಸಮಾನವಾದ ಗೌರವಕ್ಕೆ ಅರ್ಹರಾಗಿದ್ದಾರೆ” ಎಂದು ಹೇಳಿದರು.

- Advertisement -

ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ಕುರಿತು ಮಾತನಾಡಿದ ಅವರು, ಬಿಜೆಪಿ ದೇಶಾದ್ಯಂತ ಸ್ವಲ್ಪ ಮಟ್ಟದಲ್ಲಿ ಇಂಧನ ಬೆಲೆ ಕಡಿತಗೊಳಿಸಿದ ತಕ್ಷಣ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವುದೆಂದು ಭಾವಿಸುವುದು ಮೂರ್ಖತನ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ಮಾತ್ರವಲ್ಲ ರೈಲ್ವೇ, ವಿಮಾನ ನಿಲ್ದಾಣ, ಕೃಷಿ ಭೂಮಿ ಸೇರಿದಂತೆ ದೇಶದ ಆಸ್ತಿಗಳನ್ನು ಮಾರಾಟ ಮಾಡಲು ಬಿಜೆಪಿ ಉತ್ಸುಕವಾಗಿದೆ ಎಂದು ಅಖಿಲೇಶ್ ವ್ಯಂಗ್ಯವಾಡಿದರು.

Join Whatsapp