ವಿವಿ ಹಿಜಾಬ್ ವಿವಾದ : ABVP ನಾಯಕ ರಾಜೀನಾಮೆ

Prasthutha|

►ವಿದ್ಯಾರ್ಥಿನಿಯರ ಮೇಲೆ ಮೃದು ಧೋರಣೆ ತೋರಿದ್ದೇ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣ ಎಂದು ಒಪ್ಪಿಕೊಂಡ  ಕಾಲೇಜು ಯೂನಿಯನ್ ಅಧ್ಯಕ್ಷ

- Advertisement -

ಮಂಗಳೂರು : ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಶಿರವಸ್ತ್ರ ಧರಿಸಿದ ಹಿನ್ನಲೆಯಲ್ಲಿ ವಿವಾದೆಬ್ಬಿಸಿದ ಎಬಿವಿಪಿ ಪುಂಡರ ಒತ್ತಡಕ್ಕೆ ಮಣಿದು ಕಾಲೇಜು ಯೂನಿಯನ್ ಅಧ್ಯಕ್ಷ ರಾಜೀನಾಮೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ವಿದ್ಯಾರ್ಥಿ ನಾಯಕ ವಿನ್ಯಾಸ್ ಆಚಾರ್ಯ, ನಾನು ಪ್ರಿನ್ಸಿಪಾಲ್ ಮೇಲೆ ಹಿಜಾಬ್ ವಿಷಯದಲ್ಲಿ ಒತ್ತಡ ಹೇರಿಲ್ಲ ಎಂಬ ಕಾರಣಕ್ಕೆ ನನ್ನನ್ನು ಆಯ್ಕೆ ಮಾಡಿದವರೇ ನನ್ನ ವಿರುದ್ಧ ಪ್ರತಿಭಟಿಸಿದ್ದಾರೆ. ನಾನು  ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಹಿತ ದೃಷ್ಟಿಯಿಂದ  ಮೃದು ಧೋರಣೆ ತೋರಿದ್ದೇನೆ. ಇದನ್ನು  ಎಬಿವಿಪಿ ಕಾರ್ಯಕರ್ತರು ಒಪ್ಪದ ಕಾರಣ  ಈ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ

- Advertisement -

ತನ್ನ ಸಹಪಾಠಿಗಳ ವಿದ್ಯಾಭ್ಯಾಸ ದೃಷ್ಟಿಯಿಂದ ದೊಡ್ಡ ಗೊಂದಲ ಎಬ್ಬಿಸಲು ಸಹಕರಿಸದ ವಿದ್ಯಾರ್ಥಿ ನಾಯಕ ಈಗ ತನ್ನದೇ ಕಾರ್ಯಕರ್ತರ ವಿರೋಧಕ್ಕೆ ಮಣಿದು ರಾಜೀನಾಮೆ ನೀಡಬೇಕಾಗಿ ಬಂದಿದೆ.

Join Whatsapp