ಉತ್ತರಾಖಂಡ್‌ನಲ್ಲಿ ಶೀಘ್ರವೇ ಏಕರೂಪ ನಾಗರಿಕ ಸಂಹಿತೆ ಜಾರಿ: ಸಿಎಂ ಪುಷ್ಕರ್ ಸಿಂಗ್ ಧಾಮಿ

Prasthutha|

ಉತ್ತರಾಖಂಡ: ಉತ್ತರಾಖಂಡ್‌ನಲ್ಲಿ ಶೀಘ್ರವೇ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿ ಮಾಡಲಾಗುವುದು ಎಂದು ಉತ್ತರಾಖಂಡ್‌ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಘೋಷಣೆ ಮಾಡಿದ್ದಾರೆ.

- Advertisement -

ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಉತ್ತರಾಖಂಡ ಸರ್ಕಾರವು 2022ರ ಮಾರ್ಚ್‌ನಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಸಿದ್ಧಪಡಿಸಲು ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಸಾಮಾನ್ಯ ಜನರ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಒಳಗೊಂಡಿದೆ. ಸುಮಾರು 2 ಲಕ್ಷದ 31 ಸಾವಿರ ಸಲಹೆಗಳನ್ನು ಸಮಿತಿಗೆ ಕಳುಹಿಸಲಾಗಿದೆ.

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಅದರ ಪ್ರಕಾರ ಯುವತಿರ ಮದುವೆಯ ವಯಸ್ಸನ್ನು ಹೆಚ್ಚಿಸಲಾಗುತ್ತಿದ್ದು, ಮದುವೆಗೆ ಮುಂಚೆ ಅವರು ಪದವಿ ಪಡೆಯಬಹುದು. ಇದಲ್ಲದೆ, ವಿಚ್ಛೇದನದ ಸಮಾನ ಆಧಾರಗಳು ಗಂಡ ಮತ್ತು ಹೆಂಡತಿ ಇಬ್ಬರಿಗೂ ಲಭ್ಯವಿರುತ್ತವೆ.

- Advertisement -

ಪತಿಗೆ ಅನ್ವಯವಾಗುವ ವಿಚ್ಛೇದನದ ಆಧಾರವು ಪತ್ರಕ್ಕೂ ಅನ್ವಯಿಸುತ್ತದೆ. ಪ್ರಸ್ತುತ, ವೈಯಕ್ತಿಕ ಕಾನೂನಿನ ಅಡಿಯಲ್ಲಿ, ಗಂಡ ಮತ್ತು ಹೆಂಡತಿ ವಿಚ್ಛೇದನಕ್ಕೆ ವಿಭಿನ್ನ ಕಾರಣಗಳನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ಹೆಂಡತಿ ಸಾವನ್ನಪ್ಪಿದರೆ ಮತ್ತು ಅವಳ ಹೆತ್ತವರಿಗೆ ಯಾವುದೇ ಬೆಂಬಲವಿಲ್ಲದಿದ್ದರೆ, ಅವರ ಜೀವನಾಂಶದ ಜವಾಬ್ದಾರಿಯು ಗಂಡನ ಮೇಲಿರುತ್ತದೆ ಎಂದು ಹೇಳಿದೆ

ಇದಲ್ಲದೆ, ಲಿವ್-ಇನ್ ಸಂಬಂಧದ ಘೋಷಣೆ ಅಗತ್ಯವಾಗಿದ್ದು, ಇದು ಶಾಸನಬದ್ಧ ಸ್ವರೂಪವನ್ನು ಹೊಂದಿರುವ ಸ್ವಯಂ ಘೋಷಣೆಯಂತೆ ಇರುತ್ತದೆ. ಜೊತೆಗೆ ಉದ್ಯೋಗಸ್ಥ ಮಗನ ಮರಣದ ಸಂದರ್ಭದಲ್ಲಿ ಹೆಂಡತಿ ಪಡೆಯುವ ಪರಿಹಾರವನ್ನು ವಯಸ್ಸಾದ ಪೋಷಕರ ನಿರ್ವಹಣೆಗೆ ಬಳಸಬೇಕು ಎಂದು ಹೇಳಲಾಗಿದೆ. ಒಂದು ವೇಳೆ ಪತ್ನಿ ಮರುಮದುವೆಯಾದರೆ, ಪತಿಯ ಮರಣದ ನಂತರ ಪಡೆದ ಪರಿಹಾರದಲ್ಲಿ ಪೋಷಕರಿಗೂ ಪಾಲು ಇರುತ್ತದೆ.

Join Whatsapp