ಉಡುಪಿ: ಕೋಮುವಾದಿ ಮನಸ್ಥಿತಿಯ ವೈದ್ಯನ ವಿರುದ್ಧ ಕ್ರಮಕ್ಕೆ SDPI ಆಗ್ರಹ

Prasthutha|

ಉಡುಪಿ: ಬ್ರಹ್ಮಾವರ ದಲ್ಲಿರುವ ಮಹೇಶ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯ ಡಾ. ಕೀರ್ತನ್ ಉಪಾಧ್ಯ ಅವರ ಎಕ್ಸ್ ಖಾತೆಯಿಂದ ಬಂದ ಮುಸ್ಲಿಂ ಸಮುದಾಯ ವನ್ನೇ ಅಳಿಸಿಬಿಡುವ ಟ್ವೀಟ್ ಇಡೀ ಸಮುದಾಯವನ್ನು ಬೆಚ್ಚಿಬೀಳಿಸಿದೆ. ಒಬ್ಬ ವೈದ್ಯನ ಮನಸ್ಥಿತಿ ಹೀಗಿರುವಾಗ ಸಮಾಜದಲ್ಲಿ ಶಾಂತಿ ಸಾಮರಸ್ಯ ವಿಶ್ವಾಸ ಉಳಿಯುವುದು ಹೇಗೆ ಎಂದು ಎಸ್ ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಆಲಿ ಪ್ರಶ್ನಿಸಿದ್ದಾರೆ.

- Advertisement -


ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಂತಹ ಮನಸ್ಥಿತಿ ಇರುವ ಯಾವನೇ ಆಗಿರಲಿ ಅವನಿಗೆ ಶಿಕ್ಷೆ ಆಗಲೇಬೇಕು. ಇಂತಹ ಜನರು ವೈದ್ಯ ವೃತ್ತಿಗೆ ಅಪವಾದ. ಸಂಭಂದ ಪಟ್ಟ ಇಲಾಖೆಯವರು ಅವರ ವೈದ್ಯ ವೃತ್ತಿಯ ಪರವಾನಿಗೆಯನ್ನು ರದ್ದುಗೊಳಿಸಬೇಕು. ಆಸ್ಪತ್ರೆ ಆಡಳಿತ ಮಂಡಳಿ ಇಂತವರ ಬಗ್ಗೆ ಜಾಗರೂಕತೆ ವಹಿಸಬೇಕು. ಪೊಲೀಸ್ ಇಲಾಖೆ ಕೂಡ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



Join Whatsapp