ಉಡುಪಿಯಲ್ಲಿ ನಾಲ್ವರ ಹತ್ಯೆಯಿಂದ ಅನೇಕ NRIಗಳು ಆಘಾತಕ್ಕೊಳಗಾಗಿದ್ದಾರೆ: ಡಾ.ಆರತಿ ಕೃಷ್ಣ

Prasthutha|

- Advertisement -

ಉಡುಪಿ: ನೇಜಾರು ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತರ ಕುಟುಂಬ ಸದಸ್ಯರನ್ನು, ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಇದರ ಉಪಾಧ್ಯಕ್ಷೆಯಾದ ಡಾ.ಆರತಿ ಕೃಷ್ಣ, ನ.26ರ ಇಂದು ಭೇಟಿ ಮಾಡಿ ಸಾಂತ್ವನ ಹೇಳಿದರು.

ಬಳಿಕ‌ ಮಾಧ್ಯಮದೊಂದಿಗೆ ಮಾತನಾಡಿದ ಡಾ.ಆರತಿ ಕೃಷ್ಣ, ನೂರ್ ಮೊಹಮ್ಮದ್ ಕೂಡ ಎನ್‌ಆರ್‌ಐ ಆಗಿದ್ದು, ಅವರು ಸೌದಿ ಅರೇಬಿಯಾದಲ್ಲಿ ಬಹಳ ಸಮಯದಿಂದ ಕೆಲಸ ಮಾಡಿದ್ದಾರೆ. ಎನ್‌ ಆರ್‌ ಐ ಫೋರಂನ ಉಪಾಧ್ಯಕ್ಷರಾಗಿ ರಿಯಾದ್‌ಗೆ ಭೇಟಿ ನೀಡಿದ ನಂತರ ನನಗೆ ಈ ಘಟನೆ ಬಗ್ಗೆ ತಿಳಿದಿದೆ. ಈ ಘಟನೆಯಿಂದ ಅನೇಕ ಎನ್‌ ಆರ್‌ ಐಗಳು ಆಘಾತಕ್ಕೊಳಗಾಗಿದ್ದಾರೆ. ಭಾರತದಲ್ಲಿ ತಮ್ಮ ಕುಟುಂಬಗಳ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ.ಕುಟುಂಬದವರು ಸಲ್ಲಿಸಿದ ವಿನಂತಿಗಳನ್ನು ನಾನು ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ.ಆ ನಿಟ್ಟಿನಲ್ಲಿ ಈ ಕುಟುಂಬಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾನು ಕೂಡ ಹೋರಾಟ ನಡೆಸುತ್ತೇನೆ ಎಂದು ಹೇಳಿದರು.

- Advertisement -

Join Whatsapp