ಉಡುಪಿ: ಕಚೇರಿಯಲ್ಲೇ ಫೈನಾನ್ಸ್ ಮಾಲೀಕನ ಬರ್ಬರ ಹತ್ಯೆ!

Prasthutha|

ಉಡುಪಿ, ಜು.31: ಫೈನಾನ್ಸಿಯರ್ ನನ್ನು ತಡರಾತ್ರಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರ ನಂದಿಕೇಶ್ವರ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.

- Advertisement -

ಯಡ್ಯಾಡಿ- ಮತ್ಯಾಡಿ ನಿವಾಸಿ ಅಜೇಂದ್ರ ಶೆಟ್ಟಿ(33) ಕೊಲೆಯಾದ ಫೈನಾನ್ಸ್ ಮಾಲೀಕ. ಫೈನಾನ್ಸ್ ನಿಂದ ರಾತ್ರಿಯಾದರು ಮನೆಗೆ ಬಾರದಿರುವ ಹಿನ್ನೆಲೆಯಲ್ಲಿ ಮನೆಯವರು ಬಂದು ನೋಡುವಾಗ ರಕ್ತದ ಮಡುವಿನಲ್ಲಿ ಕಚೇರಿಯಲ್ಲಿ ಬಿದ್ದುಕೊಂಡಿದ್ದರು.

ಹಣಕಾಸು ವಿಚಾರದಲ್ಲಿ ತಲೆದೋರಿರುವ ಮನಸ್ತಾವವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇವರು ಕಳೆದ 5 ವರ್ಷಗಳಿಂದ ಪಾಲುದಾರಿಕೆಯೊಂದಿಗೆ ಡ್ರೀಮ್ ಫೈನಾನ್ಸ್ ಎಂಬ ಫೈನಾನ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು.  ಕೊಲೆಯ ಹಿಂದಿನ ಕಾರಣ ಪೊಲೀಸ್ ತನಿಖೆ ಯಿಂದ ಬೆಳಕಿಗೆ ಬರಬೇಕಾಗಿದೆ.

- Advertisement -

ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನಾ ಸ್ಥಳಕ್ಕೆ  ಎಸ್ಪಿ ವಿಷ್ಣುವರ್ಧನ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Join Whatsapp