ಉದ್ಧವ್ ಠಾಕ್ರೆ ನಂಬಿಕೆ ದ್ರೋಹದ ಬಲಿಪಶು: ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ

Prasthutha|

ಹಿಂದೂಗಳ ವಿಚಾರವಾಗಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿದ್ದ ಸ್ವಾಮಿ

- Advertisement -

ಮುಂಬೈ: ಹಿಂದೂಗಳ ವಿಚಾರವಾಗಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿದ್ದ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ, ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ನಂಬಿಕೆ ದ್ರೋಹದ ಬಲಿಪಶುವಗಿದ್ದಾರೆ ಎಂದು ಹೇಳಿದ್ದಾರೆ.

- Advertisement -

ಉದ್ಧವ್ ಠಾಕ್ರೆ ಅವರಿಗೆ ದ್ರೋಹ ಬಗೆಯಲಾಗಿದ್ದು, ಇದರಿಂದ ಅನೇಕರು ನೊಂದಿದ್ದಾರೆ. ಅವರ ಕೋರಿಕೆಯಂತೆ ನಾನು ಇಂದು ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಅವರು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ಜನರ ನೋವು ಕಡಿಮೆಯಾಗುವುದಿಲ್ಲ ಎಂದು ಹೇಳಿರುವುದಾಗಿ ಅವಿಮುಕ್ತೇಶ್ವರಾನಂದ ಸರಸ್ವತಿ ಬಾಂದ್ರಾದಲ್ಲಿ ಮಾತೋಶ್ರೀ ನಿವಾಸದಲ್ಲಿ ಠಾಕ್ರೆ ಅವರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದ್ರೋಹವೇ ದೊಡ್ಡ ಪಾಪ ಎಂದ ಅವರು, ದ್ರೋಹ ಮಾಡುವವನು ಹಿಂದೂ ಆಗಲು ಸಾಧ್ಯವಿಲ್ಲ. ದ್ರೋಹವನ್ನು ಸಹಿಸುವವನು ಹಿಂದೂ. ಇಡೀ ಮಹಾರಾಷ್ಟ್ರದ ಜನತೆ ಈ ದ್ರೋಹದಿಂದ ತಲ್ಲಣಗೊಂಡಿದ್ದಾರೆ ಮತ್ತು ಇದು ಇತ್ತೀಚಿನ (ಲೋಕಸಭಾ) ಚುನಾವಣೆಯಲ್ಲಿ ಪ್ರತಿಫಲಿಸಿದೆ, “ನಮಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ, ಆದರೆ ನಾವು ದ್ರೋಹದ ಬಗ್ಗೆ ಮಾತನಾಡುತ್ತಿದ್ದೇವೆ ಅದು ಧರ್ಮದ ಪ್ರಕಾರ ಪಾಪ” ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.



Join Whatsapp