ಉದಯಪುರ ಕೃತ್ಯ ಖಂಡನೀಯ, ಸಮಗ್ರ ತನಿಖೆಯಾಗಲಿ: ಮುಸ್ಲಿಮ್ ಒಕ್ಕೂಟ

Prasthutha|

ಮಂಗಳೂರು: ಇತ್ತೀಚೆಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ಪ್ರವಾದಿ ವಿರುದ್ಧ ನೀಡಿರುವ ಹೇಳಿಕೆಯನ್ನು ಬೆಂಬಲಿಸಿದ ರಾಜಸ್ತಾನದ ಉದಯಪುರದ ಕನ್ನಯ್ಯ ಲಾಲ್ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದು ಖಂಡನೀಯ. ಅಮಾಯಕ ವ್ಯಕ್ತಿಯ ಸಾವನ್ನು ನಾಗರಿಕ ಸಮಾಜ ಕಟುಶಬ್ಧದಿಂದ ಖಂಡಿಸುತ್ತದೆ. ಈ ಕೃತ್ಯದ ಹಿಂದೆ ಗೂಢಾಲೋಚನೆಯ ವಾಸನೆ ಕಾಣಿಸುತ್ತಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ಅತ್ಯಗತ್ಯ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿದ್ದಾರೆ.

- Advertisement -


ಈಗಾಗಲೇ ಹತ್ತು ಹಲವು ದೃಶ್ಯಗಳನ್ನು ಸಾಧಿಸಿದ ಫ್ಯಾಶಿಸ್ಟ್ ಪರಿವಾರ ಈ ಕೃತ್ಯದ ಹಿಂದೆ ಕೂಡಾ ತನ್ನ ಕೈ ಚಳಕ ಪ್ರದರ್ಶಿಸಿರುವ ಸಾಧ್ಯತೆ ಇದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.

Join Whatsapp