ಸಿಎಂ ಸಿದ್ದರಾಮಯ್ಯ ಭೇಟಿಯಾದ ಉಬುಂಟು ಮಹಿಳಾ ಉದ್ಯಮಿಗಳ ನಿಯೋಗ

Prasthutha|

ಬೆಂಗಳೂರು:  ಕಾಂಬೋಡಿಯಾ ದೇಶಕ್ಕೆ ತೆರಳುತ್ತಿರುವ ಉಬುಂಟು ಮಹಿಳಾ ಉದ್ಯಮಿಗಳ ನಿಯೋಗವು ಇಂದು ಉಬುಂಟು ಅಧ್ಯಕ್ಷರು ಹಾಗೂ ಸಂಸ್ಥಾಪಕರಾದ ರತ್ನಪ್ರಭಾ ಅವರ ನೇತೃತ್ವದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.

- Advertisement -

ದೆಹಲಿ, ಜೈಪುರ, ಕೊಲ್ಕತ್ತಾ, ವಿಶಾಖಪಟ್ಟಣಂ, ಬೆಂಗಳೂರು, ಮೈಸೂರು, ಚೆನ್ನೈ, ಮುಂಬೈ ಹೈದರಾಬಾದ್, ಕೊಚ್ಚಿನ್ ಮೂಲದ ಮಹಿಳೆಯರು ನಿಯೋಗದಲ್ಲಿದ್ದು, ಇದೆ 26 – 29 ರವರೆಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಭಾರತ ಹಾಗೂ ಕಾಂಬೋಡಿಯಾ ಸಂಸ್ಥೆಗಳ ನಡುವೆ  5 ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ರತ್ನಪ್ರಭಾ ಅವರು ವಿವರಿಸಿದರು.

- Advertisement -

ಉಬುಂಟು ಸಂಸ್ಥಾಪಕರಾದ ರತ್ನಪ್ರಭಾ, ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಛಾಯಾ ನಂಜಪ್ಪ,  ಎಫ್.ಕೆ.ಸಿ.ಸಿ.ಐ. ಸೇರಿದಂತೆ ವಿವಿಧ ಸಂಸ್ಥೆಯ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ.

ಕಾಂಬೋಡಿಯಾ  ಪ್ರವಾಸ ಫಲಪ್ರದವಾಗಲಿ ಎಂದು ಮುಖ್ಯಮಂತ್ರಿಗಳು ಶುಭ ಹಾರೈಸಿದರು.

Join Whatsapp