ವಿಟ್ಲ | ಚನ್ನರಾಯಪಟ್ಟಣದಲ್ಲಿ ಅಪಘಾತ : ಇಬ್ಬರು ಯುವಕರು ಮೃತ್ಯು

Prasthutha|

ವಿಟ್ಲ:  ಚನ್ನರಾಯಪಟ್ಟಣದಲ್ಲಿ ಕಾರು ಹಾಗೂ ಲಾರಿ ಡಿಕ್ಕಿ ಹೊಡೆದು ಪುತ್ತೂರು ತಾಲೂಕಿನ ಈಶ್ವರಮಂಗಲದ ಹಾಗೂ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ನಿವಾಸಿ ಯುವಕರಿಬ್ಬರು ಮೃತಪಟ್ಟಿದ್ದಾರೆ.

- Advertisement -

ಈಶ್ವರಮಂಗಲ ಸಮೀಪದ ಬಂಟಕಲ್ಲು ನಿವಾಸಿ ದೇವಿಪ್ರಸಾದ್ ಶೆಟ್ಟಿ(30) ಮತ್ತು ಕೊಳ್ನಾಡು ಗ್ರಾಮದ ಕೆಳಗಿನ ಬಾರೆಬೆಟ್ಟು ನಿವಾಸಿ, ಸುದರ್ಶನ್(32) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಐಟಿ ಉದ್ಯೋಗಿಯಾಗಿರುವ ದೇವಿಪ್ರಸಾದ್ ವಾರದ ಹಿಂದೆ ಕಾರೊಂದು ಖರೀದಿಸಿದ್ದರು. ಇವರ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಹೆರಿಗೆಯ ಸಂದರ್ಭ ಜೊತೆಯಲ್ಲಿ ಇರಲೆಂದು ಊರಿಗೆ ಹೊರಟಿದ್ದರು. ದೇವಿಪ್ರಸಾದ್ ಗೆ ಸರಿಯಾಗಿ ಡ್ರೈವಿಂಗ್ ಬಾರದ ಹಿನ್ನಲೆಯಲ್ಲಿ ಸುದರ್ಶನ್ ಅವರನ್ನು ಕರೆಸಿಕೊಂಡಿದ್ದರು. ಬೆಂಗಳೂರಿನಲ್ಲಿಯೇ ಇದ್ದ ಸುದರ್ಶನ್ ಇಬ್ಬರೂ ಜೊತೆಯಾಗಿ ಊರಿಗೆ ಹೊರಟಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

Join Whatsapp