ಮರಿ ಸತ್ತಿದ್ದಕ್ಕೆ ನೊಂದ ಆನೆಯ ದಾಳಿಗೆ ಇಬ್ಬರು ಬಲಿ

Prasthutha|

ಪಶ್ಚಿಮ ಬಂಗಾಳ: ತನ್ನ ಮರಿಯ ಸಾವಿನಿಂದ ನೊಂದು ಕೆರಳಿದ ಆನೆಯೊಂದು ಇಬ್ಬರು ವೃದ್ಧರನ್ನು ಕೊಂದಿದೆ. ಈ ಘಟನೆ ಪಶ್ಚಿಮ ಬಂಗಾಳದ ಜಾರ್‌ಗ್ರಾಮ್ ಗ್ರಾಮದಲ್ಲಿ ನಡೆದಿದೆ. ಆನಂದ್​ ಹಾಗೂ ಶಶಧರ್​ ಮಹಾತಾ ಮೃತರು.

- Advertisement -

ಜನರು ಮರಿ ಆನೆ ಮರಿಯ ಶವ ನೋಡಲು ಬಂದಿದ್ದ ವೇಳೆ ಆನೆ ದಾಳಿ ನಡೆಸಿದೆ. ಈ ವೇಳೆ ಜನರು ಓಡಿ ಹೋಗಿದ್ದಾರೆ. ಆದರೆ ಇಬ್ಬರು ವೃದ್ಧರಿಗೆ ಆನೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ದಾರಣವಾಗಿ ಮೃತಪಟ್ಟಿದ್ದಾರೆ. ಅಲ್ಲದೆ, ಕೋಪಗೊಂಡ ಆನೆ ರಾಮೇಶ್ವರ ದೇವಸ್ಥಾನದ ಬಳಿ ಇರುವ ಚಾಂದಬಿಲಾ ಬಳಿ ನಿಂತಿದ್ದ ಬಸ್​ ಹಾಗೂ ಬೈಕ್​ ಅನ್ನು ಬೀಳಿಸಿ ಸಿಟ್ಟು ತೋರಿಸಿಕೊಂಡಿದೆ.

ಆನೆಯ ದಾಳಿಯಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು 40 ಮಂದಿ ಅರಣ್ಯ ಸಿಬ್ಬಂದಿ ತಂಡವನ್ನು ನಿಯೋಜಿಸಲಾಗಿದ್ದು, ಅವರು ಸೂಕ್ತವ್ಯವಸ್ಥೆ ಮಾಡಿದ್ದಾರೆ ಎಂದು ಡಿಎಫ್​ಒ ಶಿವಾನಂದ ರಾವ್ ಹೇಳಿದ್ದಾರೆ.

Join Whatsapp