ಕಾಂಗ್ರೆಸ್ ಶಾಸಕರ ದೂರಿನನ್ವಯ ರಾಯ್ ಪುರದಲ್ಲಿ ಇಬ್ಬರು ಪತ್ರಕರ್ತರ ಬಂಧನ

Prasthutha|

ಛತ್ತೀಸ್ ಘಡ: ತಮ್ಮ ವಿರುದ್ದ ಕಪೋಕಲ್ಪಿತ ಮತ್ತು ಆಧಾರರಹಿತ ವರದಿಯನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕರಿಬ್ಬರು ನೀಡಿದ ದೂರಿನನ್ವಯ ಛತ್ತೀಸ್ ಘಡ ಪೊಲೀಸರು ಪತ್ರಕರ್ತ ಮತ್ತು ತಾಂತ್ರಿಕ ಸಹಾಯಕನನ್ನು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ಉಲ್ಲೇಖಿಸಿದೆ.

- Advertisement -

zeroparty.in ಪೋರ್ಟಲ್ ನಲ್ಲಿ ಪತ್ರಕರ್ತರಾಗಿರುವ ಮಧುಕರ್ ದುಬೆ ಮತ್ತು ತಾಂತ್ರಿಕ ಸಹಾಯಕ ಹುದ್ದೆಯನ್ನು ನಿಭಾಯಿಸುತ್ತಿರುವ ಅವಿನಾಶ್ ಪಲ್ಲಿವಾರ್ ಎಂಬವರ ವಿರುದ್ಧ ಕಾಂಗ್ರೆಸ್ ಶಾಸಕರಾದ ಬೃಹಸ್ಪತ್ ಸಿಂಗ್ ಮತ್ತು ಕಲದೀಪ್ ಜುನೇಜಾ, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಸಕ್ತ ದೂರಿನನ್ವಯ ದುಬೆ ಮತ್ತು ಪಲ್ಲಿವಾರ್ ವಿರುದ್ಧ ಸುಲಿಗೆ, ಕೊಲೆ ಬೆದರಿಕೆ, ಕ್ರಿಮಿನಲ್ ಚಟುವಟಿಕೆ, ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ, ಮಾನನಷ್ಟ ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

ಸದ್ಯ ಪೊಲೀಸರು ಬಂಧಿತ ಪತ್ರಕರ್ತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Join Whatsapp