ಹಾಸನ ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆ ?

Prasthutha|

ಹಾಸನ: ಹಾಸನದಲ್ಲಿ ನಡೆದ ಜನತಾ ಜಲಧಾರೆಯಲ್ಲಿ ಶಾಸಕ  ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಗೈರಾಗಿದ್ದಕ್ಕೆ ಮಾಜಿ ಪ್ರಧಾನಿ ದೇವೆಗೌಡರು ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.

- Advertisement -

ಶಾಸಕರನ್ನು ಡ್ರಾಮಾ ಮಾಸ್ಟರ್ ಎಂದು ವ್ಯಂಗ್ಯವಾಡಿದ ದೇವೇಗೌಡರ ಮಾತಿಗೆ ಮಗ ಕುಮಾರಸ್ವಾಮಿ ಕೂಡಾ ಸಾಥ್ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ದೇವೇಗೌಡ, ನಾನು ಮೊದಲು ಮಂತ್ರಿ ಆಗಲು 22 ವರ್ಷ ಕಾದಿದ್ದೆ. ಈಗಿನ ಶಾಸಕರು ಗೆದ್ದ ಬೆಳಗ್ಗೆಯೇ ಮಂತ್ರಿ ಆಗಬೇಕು ಎಂದು ಹೇಳುತ್ತಾರೆ. ಅರಸೀಕೆರೆಯಲ್ಲಿ ಅವರು ಬೆಳೆದು ಬರಲು ನಾನೇ ಕಾರಣ. ಈಗ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಗೌಡರು  ಅವರೊಬ್ಬ ಡ್ರಾಮಾ ಮಾಸ್ಟರ್ ಎಂದು ಕಿಡಿಕಾರಿದ್ದಾರೆ. ಗೌಡರ ಮಾತಿಗೆ  ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ದನಿಗೂಡಿಸಿದ್ದು ಅವರ ನಾಟಕ ಎಲ್ಲಾ ನನಗೆ ಗೊತ್ತು ಎಂದಿದ್ದಾರೆ.

- Advertisement -

ಇನ್ನೂ ದೇವೇಗೌಡರ ಟೀಕೆಗೆ  ಶಿವಲಿಂಗೇಗೌಡ ಪ್ರತಿಕ್ರಯಿಸಿದ್ದು, ನನಗೆ ಡ್ರಾಮಾ ಮಾಡಿ ಗೊತ್ತಿಲ್ಲ.. ಹೇಳೋದಿದ್ದರೆ ನೇರವಾಗಿ ಹೇಳುತ್ತೇನೆ. ಡ್ರಾಮಾ ಮಾಡದೇ ಇದ್ದರೆ ವೋಟ್ ಸಿಗುತ್ತಾ.. ನಾನ್ ಬರಲ್ಲ ಅಂತಾ ರೇವಣ್ಣಗೆ ತಿಳಿಸಿದ್ದೆ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.

ಈ ಮಧ್ಯೆ ಶಿವಲಿಂಗೇ ಗೌಡ ಮತ್ತು ಎ.ಟಿ.ರಾಮಸ್ವಾಮಿ ಪಕ್ಷ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Join Whatsapp