ಜಮೀನಿಗೆ ಹೋದ ಸೋದರರಿಬ್ಬರು ಸಿಡಿಲು ಬಡಿದು ಸಾವು: ಕುಟುಂಬದವರ ಆಕ್ರಂದನ

Prasthutha|

ಶಿವಮೊಗ್ಗ: ಜಮೀನಿಗೆ ಹೋದ ಸಹೋದರರಿಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ಬಳಿ ನಿನ್ನೆ ರಾತ್ರಿ ನಡೆದಿದೆ. ಸಹೋದರರಾದ ವೀರ(32), ಸುರೇಶ್(30) ಮೃತರು.

- Advertisement -

ಗದ್ದೆಯಲ್ಲಿ ಕಟಾವು ಮಾಡಿದ್ದ ಭತ್ತವನ್ನು ರಾಶಿ ಹಾಕಿದ್ದು, ಅದನ್ನು ಕಾಯಲು ಸಹೋದರರು ಹೋಗಿದ್ದರು. ಈ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಮೃತರ ಕುಟುಂಬಸ್ಥರ ಆಕ್ರಂದನ ನೆರದವರ ಕರುಳು ಚುರುಕ್ ಎನ್ನಿಸುತ್ತಿದೆ. ಭದ್ರಾವತಿ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp