ಸಾರಿಗೆ ನೌಕರರ ಮುಷ್ಕರ | ನಾಳೆ ಎಲ್ಲೆಲ್ಲಿ ಬಂದ್ ಗೆ ಬೆಂಬಲ?

Prasthutha|

ಬೆಂಗಳೂರು : ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಏಪ್ರಿಲ್ 7ರಂದು ಬುಧವಾರ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇದರ ಬಿಸಿ ಈಗಾಗಲೇ ಪ್ರಯಾಣಿಕರ ಮೇಲೆ ತಟ್ಟುತ್ತಿದ್ದು ಮೆಜೆಸ್ಟಿಕ್, ಶಾಂತಿನಗರ ಸೇರಿದಂತೆ ಬೆಂಗಳೂರಿನಲ್ಲಿ ಹಲವಾರು ಕಡೆ ಬಸ್ ಸಂಚಾರಗಳಿಲ್ಲದೆ ಜನರು ಪರದಾಡುವಂತಾಗಿದೆ.

- Advertisement -

ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಗದಗ, ಕಾರವಾರ, ಮಂಗಳೂರು, ರಾಯಚೂರು, ರಾಮನಗರ, ಕೊಪ್ಪಳ, ಮಂಡ್ಯ ಸೇರಿದಂತೆ ರಾಜ್ಯದ ಬಹುಪಾಲು ಕಡೆ ಬಂದ್ ಗೆ ಬೆಂಬಲ ದೊರಕಿದೆ ಎಂದು ತಿಳಿದುಬಂದಿದೆ.

Join Whatsapp