ಒಡಿಶಾದ ರೂರ್ಕೆಲಾ ಉಕ್ಕು ಸ್ಥಾವರದಲ್ಲಿ ವಿಷಕಾರಿ ಅನಿಲ ಸೋರಿಕೆ : ನಾಲ್ವರು ಸಾವು

Prasthutha|

ಭುವನೇಶ್ವರ : ಒಡಿಶಾದ ರೂರ್ಕೆಲಾ ಉಕ್ಕು ಸ್ಥಾವರದ ಕಲ್ಲಿದ್ದಲು ರಾಸಾಯನಿಕ ಘಟಕದಲ್ಲಿ ಬುಧವಾರ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ ಕನಿಷ್ಠ ನಾಲ್ವರು ಗುತ್ತಿಗೆ ಕಾರ್ಮಿಕರು ಮೃತಪಟ್ಟಿದ್ದಾರೆ. ಇತರ ಆರು ಮಂದಿ ಗಂಭೀರ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ.

- Advertisement -

ಮೃತ ಹಾಗೂ ಅನಾರೋಗ್ಯಕ್ಕೊಳಗಾದ ಕಾರ್ಮಿಕರು ಕಲ್ಲಿದ್ದಲು ರಾಸಾಯನಿಕ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಾವರದಲ್ಲಿ ಎಲ್ಲಾ ತುರ್ತು ರಕ್ಷಣಾ ಕ್ರಮಗಳನ್ನು ಆರಂಭಿಸಲಾಗಿದೆ. ಮೃತಮಟ್ಟವರನ್ನು ಗಣೇಶ್ ಚಂದ್ರ (59), ಅಭಿಮನ್ಯು ಸಾಹು (33), ರವೀಂದ್ರ ಸಾಹು (59) ಹಾಗೂ ಬ್ರಹ್ಮಾನಂದ ಪಾಂಡ (31) ಎಂದು ಗುರುತಿಸಲಾಗಿದೆ.

Join Whatsapp